ಮಂಗಳವಾರ, ಸೆಪ್ಟೆಂಬರ್ 21, 2021

ವಿಶೇಷಗಾನಗಣಿಗಾರಿಕೆ





 

"ತಾನು ಹಾಡಲಾಗದ

ಹಾಡಿಗೆ ಮತ್ತೊಬ್ಬ ಮಹಾನ್ ಗಾಯಕನೇ

ಸೂಕ್ತ ಎಂದು ದೊಡ್ಡತನ ಮೆರೆದ

ಪಿ.ಬಿ.ಶ್ರೀನಿವಾಸ್ .. !!! "


 "ಪಿ.ಬಿ.ಎಸ್. ಜನುಮದಿನಕೆ ವಿಶೇಷಗಾನಗಣಿಗಾರಿಕೆ"



"ಒಬ್ಬ ಶ್ರೇಷ್ಠ ಗಾಯಕ ತಾನು ಹಾಡಲಾಗದ ಹಾಡನ್ನ ಮತ್ತೊಬ್ಬ ಗಾಯಕನಿಗೆ ಸೂಚಿಸಿದ ಮಹಾಸನ್ನಿವೇಶ ಸೃಷ್ಠಿಯಾದ ಕ್ಷಣವದು ..!"


ಚಿತ್ರವೊಂದರ ಹಾಡಿನ ಧ್ವನಿ ಮುದ್ರಣಕ್ಕೆ ಸ್ಟುಡಿಯೋ ಸಜ್ಜಾಗಿತ್ತು..ಅದು ಮೊದಲೇ ಪುಟ್ಟಣ್ಣ ಕಣಗಾಲರ ಚಿತ್ರ.ಉಪೇಂದ್ರಕುಮಾರ್ ಕುಮಾರ್ ಸುಶ್ರಾವ್ಯ ಸ್ವರ ಪ್ರಸ್ತಾರಕ್ಕೆ ವಿಜಯನಾರಸಿಂಹ ಅದ್ಬುತ ಸಾಹಿತ್ಯವನ್ನ ಹೊಸದಾಗಿತ್ತು.

...


   ಇದಕ್ಕೂ ಮುಂಚೆ ಆ ಚಿತ್ರದ ಒಂದಷ್ಟು ಮಾಹಿತಿ ತಿಳಿಯೋಣ.


ಅದು 1989 ರ ಸಮಯ ... ಪುಟ್ಟಣ್ಣ ಕಣಗಾಲ್ ರು "ಜಡಭರತ" ರವರ ಕಥೆಯಾಧಾರಿತ "ಧರ್ಮಸೆರೆ" ಹೆಸರಿನ ಚಿತ್ರವನ್ನ ತೆರೆಗೆ ತರಲು ಮನಸು ಮಾಡಿದ್ದರು.ಶ್ರೀನಾಥ್, ಆರತಿ, ಸತ್ಯಪ್ರಿಯ ಅಭಿನಯದ ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶಕರಾಗಿ

ಆಯ್ಕೆಯಾಗಿದ್ದರು.ಇಡಿ ಚಿತ್ರದ ಹಾಡುಗಳನ್ನ ವಿಜಯನಾರಸಿಂಹ ರಚಿಸಲಾಗಿದೆ.

ಈ ಚಿತ್ರಕ್ಕಾಗಿ ಆರತಿಯವರೇ ನಿರ್ಮಾಣ ಮಾಡಿದ್ದು ಇನ್ನೊಂದು ವಿಶೇಷ.


  ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಧರ್ಮಸೆರೆ" ಚಿತ್ರವೊಂದಕ್ಕೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್ ಏಕೈಕ ಚಿತ್ರವಾಗಿಹೋಯ್ತು.


 "ಧರ್ಮಸೆರೆ" ಚಿತ್ರ ನಾಯಕಿ ಪ್ರಧಾನಪಾತ್ರವಾದರೂ ಶ್ರೀನಾಥ್ ಗೂ ಅಭಿನಯಕ್ಕೆ ಅವಕಾಶ ಇತ್ತು. ಈ ಚಿತ್ರದ ಅದ್ಬುತ, ವಿಶೇಷ ಕಥೆ ಗ್ರಹಿಸಿಯೇ ಆರತಿ, ಚಿತ್ರ ನಿರ್ಮಿಸಿ, ನಾಯಕಿಯಾಗಿರಲು ಸಾಧ್ಯವಾಯಿತು

 ದೊಡ್ಡ ಮಗಳು ಮೂಕಿ (ಆರತಿ), ಎರಡನೆಯಕೆ ವಾಚಾಳಿ. ಹೆಣ್ಣು ನೋಡಬಂದ ಹುಡುಗ (ಶ್ರೀನಾಥ್) ತಂಗಿಯನ್ನು ಮದುವೆಯಾಗುವುದನ್ನು ಹೇಳುವಾಗ ಹೂಗುಟ್ಟುವ ತಂದೆ, ತಾಳಿ ಕಟ್ಟುವ ಸಮಯದಲ್ಲಿ ಅಕ್ಕನ ಮದುವೆಯಾಗದೆ ತಂಗಿಗೆ ಮದುವೆ ಮಾಡಲಾಗದು, ಮೂಕಿ ಅಕ್ಕನಿಗೂ ತಾಳಿ ಕಟ್ಟಿ, ನನ್ನ ಧರ್ಮಸೇರೆಯನ್ನು ನಿವಾರಿಸಿ ಎಂದು ಭಾವಿ ಅಳಿಯನ್ನು ಹಿಡಿದಿದ್ದಾನೆ. ಕಟ್ಟುತ್ತದೆ.ತಂದೆಯ ಧರ್ಮಸೆರೆಯೇನೋ ಕಳೆಯಿತು, ಮುಂದಿನ ಬಾಳುವೆ ಹೇಗೆ ಎಂದು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.


  ಈ ...

  ಕೇವಲ ಮೂರೇ ಮೂರು ಹಾಡುಗಳಿದ್ದ ಈ ಚಿತ್ರಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಪಿ.ಬಿ.ಎಸ್ ಅದೆಷ್ಟೇ ಶ್ರಮವಹಿಸಿ ಹಾಡಿದರೂ ಹಾಡು ಓಕೆಯಾಗುತ್ತಲೇ ಇದೆ. ಪುಟ್ಟಣ್ಣರಿಗೂ ಮತ್ತೆ ಹಿರಿಯ ಗಾಯಕರನ್ನ ಬೇಡ ಎನ್ನಲೂ ಆಗುತಿಲ್ಲ ... ಕೋರ್ಸ್ ಈ ಹಾಡು ಆರಂಭದಿಂದಲೇ ಎತ್ತರದ ಪಿಚ್ ನಲ್ಲಿ ಬೇಕು ಎಂದು ಪುಟ್ಟಣ್ಣರು ಉಪೇಂದ್ರಕುಮಾರ್ ಗೆ ಹೇಳಿ ರಾಗಸಂಯೋಜನೆ ಮಾಡಲಾಯಿತು. ಹಾಡು ಅವರ ನಿರೀಕ್ಷೆಯ ಮಟ್ಟಕ್ಕೆ ಮೂಡುತ್ತಲೂ ಇದೆ. ನೀಡಬಲ್ಲರು "ಎಂದುಬಿಟ್ಟರು.

ಅಷ್ಟು ರಿಹರ್ಸಲ್ ಮಾಡಿದರೂ ಕೊನೆಗೂ ಆ ಹಾಡಿನ ರೇಂಜ್ ಪಿ.ಬಿ.ಎಸ್.ರಿಗೆ ಮುಟ್ಟದೇ ಹೋಯ್ತು.

ಆ ಹಾಡು ಯಾವುದೆಂದರೆ ಶ್ರೀನಾಥ್ ಮಗುವಿನನ್ನ ಎತ್ತಿ ಹಾಡುವ ಸನ್ನಿವೇಶದ ಹಾಡು. "ಕಂದ ... ಓ ನನ್ನ ಕಂದ ..." ಎಂದು ಈ ಹಾಡು ಕೊನೆಗೂ ಸಾವಿರಾರು ಅಸಾಧಾರಣ ಗೀತೆಗಳನ್ನ ನೀರು ಕುಡಿದಂತೆ ಹಾಡಿದ, ಪಿ.ಬಿ.ಎಸ್ ರಿಗೆ ದಕ್ಕದೆ ಹೋದದ್ದು ವಿಪರ್ಯಾಸ ..!


  ಸರಿ ... ಈ ಹಾಡನ್ನ ಹಾಡಲು ಇನ್ನೊಂದು ದಿನ ಎಸ್.ಪಿ.ಬಿ.ಯವರು ಸ್ಟುಡಿಯೋ ಗೆ ಆಗಮಿಸಿದರು.ಅವರಂತೂ ಈ ಹಾಡು ಪಿ.ಬಿ.ಎಸ್. ಹಾಡಬೇಕಿತ್ತು ಸಂಕೋಚದಲ್ಲೇ ನಿರಾಕರಿಸಿಬಿಟ್ಟರು.ಕೊನೆಗೆ ಪಿ.ಬಿ.ಎಸ್ ರನ್ನ ಸೇರಿಸಿದರು, ಅವರ ಮೂಲಕ ಎಸ್.ಪಿ.ಬಿ ಯವರಿಗೆ ಕರೆ ಮಾಡಿ ಹೇಳಿದ್ದಾಗಲೇ ಎಸ್.


  ಆದಾಗ್ಯೂ .. ಈ ಹಾಡನ್ನು ಕೇಳಿದ ಮೇಲೆ ಪಿ.ಬಿ.ಎಸ್ ರ ಅಭಿಪ್ರಾಯ ಸರಿಪಡಿಸುತ್ತದೆ.ಏಕೆಂದರೆ ... ಈ ಹಾಡಿಗೆ ಬೇಕಾದ ತಾರಕ ಸ್ವರ ಮೂಡುಸುವಲ್ಲಿ ಮಾಧುರ್ಯ ಗಾಯಕ ಪಿ.ಬಿ.ಎಸ್ ರ ದನಿ ಹೊಂದಿಕೆಯಾಗುತ್ತಿರುವುದರ ಅಂಶ ತಿಳಿಯುತ್ತದೆ.


   ಕೊನೆಗೆ ಎಸ್.ಪಿ.ಬಿಯವರು ಅದ್ಬುತವಾಗಿ ಹಾಡಿ ಇಂದಿಗೂ ಆ ಹಾಡು ಎಲ್ಲರ ನೆಚ್ಚಿನ ಗೀತೆಯಾಗಿ ಉಳಿದಿದೆ.


_____________________________________

ಹಾಡು: ಕಂದ ಓ ನನ್ನ ಕಂದ ಗಾಯಕರು: ಎಸ್ ಪಿ ಬಾಲು ಸರ್

ಗೀತ ರಚನೆ: ವಿಜಯ ನಾರಸಿಂಹ

ಸಂಗೀತ: ದಿ॥ ಉಪೇಂದ್ರಕುಮಾರ್ $$$$$$$$$$$$$$$$


ಮುನ್ನುಡಿ $$$$$$$$$$$$$$$$



ಕಂದಾಆ .......


ಓ ನನ್ನ ಕಂದ .......... ಕಂದ ....... ಆನಂದ ಕಂದ, ಕೃಷ್ಣ ಮುಕುಂದ,

ಬಾ ಬಾ ಓಡಿ ಬಾ ... ಕೃಷ್ಣ ಮುಕುಂದ ......

ತೋರೋ ನಿನ್ನ ಚಂದದ ವದನಾರವಿಂದ


ಕಂದಾ ಆ ..................... ಓ


ನನ್ನ ಕಂದ, ಕೃಷ್ಣ ಮುಕುಂದ


$$ $$$$$$$$$$$$$$ ಹಿನ್ನೆಲೆ ಸಂಗೀತ $$$$$$$$$$

ಜಾಲತಾಣದಳವಡಿಕೆ: ಮುರಳೀಧರ ನಾಯ್ಕ $$$$$$$$$$$$$$

ಹಿನ್ನೆಲೆ ಸಂಗೀತ $$$$$$$$$$$$$$$$


ಎಷ್ಟು ಸುತ್ತಿ ಬೆಟ್ಟ


ಹತ್ತಿ ತೊಟ್ಟಿಲ ತಂದಿರುವೆ

ಪುಟಾಣಿ ಕಂದ ಹೂವಿನಂಥ

ಹಾಸಿಗೆ ಹಾಸುವೆ ....... .... $$$$$$$$$$$$$$$$

ಅಲ್ಪ ಸಂಗೀತ $$$$$$$$$$$$$$$$$$


ಎಷ್ಟು ಸುತ್ತಿ ಬೆಟ್ಟ


ಹತ್ತಿ ತೊಟ್ಟಿಲ ತಂದಿರುವೆ

ಪುಟಾಣಿ ಕಂದ ಹೂವಿನಂಥ

ಹಾಸಿಗೆ ಹಾಸುವೆ .........

ಅಕ್ಕರೆ ತುಂಬಿದ ಸಕ್ಕರೆ

ಹಾಲಿನ ಬಟ್ಟಲ ನಾ ಕೊಡುವೆ

ಅಕ್ಕರೆ ತುಂಬಿದ ಸಕ್ಕರೆ

ಹಾಲಿನ ಬಟ್ಟಲ ನಾ ಕೊಡುವೆ

ನನ್ನ ಎದೆಯ ತಂತಿ ಮೀಟಿ ಲಾಲಿ ಹಾಡುವೆ

ಲಾಲಿ ಲಾಲಿ ಜೋ ಜೋ ... ಕಂದ

ಲಾಲಿ ಲಾಲಿ ಜೋ ಜೋ ...

ಜೋ ಜೋ .. .ಜೋ ಜೋ ... ಜೋ ಜೋ ...

ಲಾಲಿ .... ಲಾಲಿ .... ಲಾಲಿ ....

$$$$$$$$$$$$$$$$


ಕಂದಾ ಆ ................. ....

ಓ ನನ್ನ ಕಂದ, ಕಂದ ............ $$$$$$$$$$$$$$$$$


ಹಿನ್ನೆಲೆ ಸಂಗೀತ $$$$$$$$$$$$$$$$

ಜಾಲತಾಣದಳವಡಿಕೆ: ಮುರಳೀಧರ ನಾಯ್ಕ $$$$$$$$$$$$$$

ಹಿನ್ನೆಲೆ ಸಂಗೀತ $$ $$$$$$$$$$$$$$$


ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ


ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ ...

$$$$$$$$$$$$$$$ குறுகிய ಸಂಗೀತ $$$$$$$$$$$$


ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ


ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ ...

ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ

ಬೆಳ್ಳಿ ಬೆಟ್ಟದ ಶಿವನ

ಕೇಳಿ ನಂದಿಯ ತರುವೆ ಅವರ ಸಂಗ ಸೇರಿ ನೀನು ಆಡೆಲೋ ಮಗುವೆ..ಏಏ ...



ಕಂದಾಆ ....... ಓ ನನ್ನ ಕಂದ ..........

_____________________________________


  ಮೊನ್ನೆ ರೇಡಿಯೋ ಸಂದರ್ಶನ ವೊಂದರಲ್ಲಿ ಪುಟ್ಟಣ್ಣರ ಸಹಾಯಕ ನಿರ್ದೇಶಕರಾಗಿರುವ ಪಂಚಮವೇದ ಖ್ಯಾತಿಯ ಪಿ.ಎಚ್.ವಿಶ್ವನಾಥ್ ಈ ಕುರಿತು ಒಂದೆರಡು ಸಾಲಿನಲ್ಲಿ ಹೇಳಿದ ಮಾಹಿತಿ ಇಂದಿನ ಪಿ.ವ

ಬಿಎಸ್ ಜನುಮದಿನಕೆ "ವಿಶೇಷಗಾನಗಣಿಗಾರಿಕೆ" ಯಾಗಿ ಸೃಷ್ಠಿಯಾಯ್ತು.


  ಅದೇನೇ ... ಇರಲಿ ಒಬ್ಬ ಅಸಾಮಾನ್ಯ ಗಾಯಕ ಒಂದು ಹಾಡಿಗೆ ತನ್ನ ದನಿಯಿಂದ ನ್ಯಾಯ ಒದಗಿಸಲಾಗದಾಗ, ಮತ್ತೊಬ್ಬ ಗಾಯಕನೇ ಈ ಹಾಡು ಹಾಡಲು ಸೂಕ್ತ ಎಂದು ನಿರ್ಧರಿಸಿ, ಒಪ್ಪಿಗೆ ಸೂಚಿಸಿ, ಆ ಗಾಯಕ ಅವರ ಅಭಿಮಾನಿಗಳಿಗೆ ಹಾಡಲು ಹಿಂಜರಿದಾಗ, ನೀವೇ ಈ ಹಾಡು ಹಾಡಲು ಸೂಕ್ತ ಎಂದು ಹೇಳುವ "ದೊಡ್ಡತನ" ಮೆರೆಯುವ ನಿದರ್ಶನವಿದೆಯಲ್ಲಾ ಅದು ನಿಜಕ್ಕೂ 'ಅಮೃತಘಳಿಗೆ 'ಎನ್ನಬಹುದು.


  ಪಿ.ಬಿ.ಎಸ್. ಜನು.ದಿನದ ಈ ಸಂಧರ್ಭದಲ್ಲಿ ಪಿ ಬಿ ಎಸ್ ಎಸ್ ನೆನಪು ಮಾಡಿಕೊಳ್ಳುತ್ತಾ, ಅವರ ದೊಡ್ಡತನವನ್ನು ಪ್ರಶಂಸಿಸುತ್ತಾ ಅವರ ದೊಡ್ಡತನಕೆ ನಮ್ಮದೊಂದು ಶುಭ ಹಾರೈಕೆ ತಿಳಿಸೋಣ.


   ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...