ಮೊನ್ನೆ ಹಂಸಲೇಖರು ಆಂತರಿಕ
ಗಾನಕರುಹು ಬೆನ್ನತ್ತಿ ಹೊರಟ
ಗಾನಶಿಕಾರಿ ಗಾನಗಣಿಗಾರಿಕೆಯಲ್ಲಿ
ಸೆರೆಯಾಯ್ತು ... !!!
ಮೊನ್ನೆ ಎಸ್.ಪಿ.ಬಾಲಸುಬ್ರಮಣ್ಯಂ ನಿಧನರಾದಾಗ ಕನ್ನಡ ನಾಡಿನ ದೇಸಿದೊರೆ ನಾದಬ್ರಹ್ಮ ಹಂಸಲೇಖ ರವರು ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿ ಮಾತನಾಡುತ್ತಾ..ಮಧ್ಯೆ ಒಂದು ಹಾಡಿನ ಬಗ್ಗೆ ಮಾತನಾಡಿದ್ದನ್ನ ಯಾರೂ ಅಷ್ಟಾಗಿ ಗಮನಿಸಲಿಲ್ಲ ಅನ್ಸುತ್ತೆ.
ಅಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ರಿಗೆ "ಗಾನಯೋಗಿ ಪಂಚಾಕ್ಷರಿ ಗವಾಯಿ" ಚಿತ್ರದ ಹಾಡು ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಮಾಡುವ ಹೊತ್ತಿನಲ್ಲಿ "ಬಾಂಬೆ" ಸಿನಿಮಾದ ಹಾಡು ತುಂಬಾ ಪೈಪೋಟಿ ನೀಡಿ, ಪ್ರಶಸ್ತಿ ಯ ಮುಂಚೂಣಿಯಲ್ಲಿದ್ದಾಗ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಪಿ.ಬಿ.ಶ್ರೀನಿವಾಸ್, ಹಂಸಲೇಖರ ಪ್ರತಿಭೆ ಬಗ್ಗೆ ಬಹಳ ಅರಿವು ಉಂಟಾಗುತ್ತಿದೆ
ಪಿ.ಬಿ. ಹಂಸಲೇಖರ ಒಂದು ಹಾಡಿಗೆ ರಾಷ್ಟಪ್ರಶಸ್ತಿ ಕೇವಲ ಆ ಹಾಡಿನ ಇಂಗ್ಲೀಷ್ ಅನುವಾದವಿಲ್ಲದೆ, ಸಮಿತಿ ಸದಸ್ಯರಿಗೆ ಅರ್ಥ ಮಾಡಲಾಗದ ವಂಚಿತವಾಗಿತ್ತಲ್ಲ.ಆ ಪ್ರತಿಭೆಯೇ ಹಂಸಲೇಖ "ಎಂದು ಹೇಳಲಾಗಿದೆ.
ಆದರೆ ಆ ಹಾಡು ಯಾವುದು? ಅದು ಯಾವ ಚಿತ್ರದ ಹಾಡು? ಪ್ರಶಸ್ತಿ ವಂಚಿತ ಆ ಹಾಡಿನ ಎದುರು ಪ್ರಶಸ್ತಿ ಬಾಚಿಕೊಂಡ ಸಾಹಿತಿ ಯಾರು? ಎಂದು #ಗಾನಗಣಿಗಾರಿಕೆ ಒಂದೇ ಸಮನೆ ತಲೆಯೊಳಗೆ ಹುಳ ಬಿಟ್ಟು ಕೂತವನಿಗೆ ಕೊನೆಗೆ ಆ ಪ್ರಶಸ್ತಿ ವಂಚಿತ ಹಾಡು ಸಿಕ್ಕೇಬಿಟ್ಟಿತ್ತು ..!
1996 ರಲ್ಲಿ "ಮ" ಕಾರ ಪ್ರಿಯ ಉದ್ಯಮಿ ನಿರ್ಮಾಪಕ ಸಂದೇಶ್ ನಾಗರಾಜು ಅವರ ಪ್ರೀತಿಯ ಗೆಳೆಯ ನಟ ಅಂಬರೀಶ್ ಅಭಿನಯದಲ್ಲಿ ಎಸ್. ಕೊಡುವ ವಿಶಿಷ್ಟ ಪ್ರಶ್ನೋತ್ತರ ಹಾಡೇ ಆ ಪ್ರಶಸ್ತಿ ವಂಚಿತ ಹಾಡು.
"ಅಮ್ಮ ಅಮ್ಮ ಹೇಳಮ್ಮ ... ಎಂದು ಆರಂಭವಾಗುವ ಈ ಹಾಡು ಅಂಧ ಮಗುವು ಕೇಳುವ ನೋಡಲಾಗದ ಆ ಮಗುವಿನ ಅನುಭವಕೆ ಬರುವಂತೆ ಬಹಳ ವಿಶಿಷ್ಟವಾದ ಭಾಷೆಯಲ್ಲಿ ಬಣ್ಣ, ದೇವರು, ಗಾಳಿ..ಹೀಗೆ ಹಲವು ವಿಷಯಗಳ ಭಾಗಗಳನ್ನು ಅರ್ಥೈಸುವ ವಿಶಿಷ್ಟ ಸಾಹಿತ್ಯವನ್ನು ಹಂಸಲೇಖ ರಚಿಸಿದ, ಆ ಹಾಡಿನ ಅರ್ಥವನ್ನು ಆಂಗ್ಲಭಾಷೆಯಲ್ಲಿ ತರ್ಜುಮೆ ಮಾಡಿ ರಾಷ್ಟಪ್ರಶಸ್ತಿಯನ್ನು ಆರಿಸಿಕೊಳ್ಳುವುದು ಇನ್ನೊಂದು ಹಾಡಿಗೆ ಪ್ರಶಸ್ತಿ ದೊರೆಯುವಂತಾಯ್ತು.
-------------------------------
ಚಿತ್ರ- ಮೌನರಾಗ (1996)
ಸಾಹಿತ್ಯ- ಸಂಗೀತ- ಹಂಸಲೇಖ
ಗಾಯನ- ಮನು, ಚಿತ್ರಾ, ಮೋನಿಕಾದತ್
ಅಮ್ಮ ಅಮ್ಮ ಹೇಳಮ್ಮ?
ಬಣ್ಣ ಅಂದರೆ ಏನಮ್ಮ?
ಭಾವಗಳಿಂದಲೇ ಬಾಳಮ್ಮ
ಬಣ್ಣ ಬಣ್ಣ ಅದರ ಮುಖವಮ್ಮ
ಅಪ್ಪ ಅಪ್ಪ ಹೇಳಪ್ಪ?
ಬೆಳಕು ಅಂದರೆ ಎನಪ್ಪ?
ಬೆಂಕಿ ಬೆಳಕೇ ಜಗವಮ್ಮ
ನೋವೇ ಬೆಂಕಿ ನಲಿವೇ ಬೆಳಕಿನಮ್ಮ
ಕತ್ತಲೆ ಎಂದರೆ ಏನಮ್ಮ?
ಬೆಳಕೇ ಇಲ್ಲದ ಜಗವಮ್ಮ
ಲೋಕ ಎಂದರೆ ಏನಪ್ಪ?
ಅಪ್ಪ ಅಮ್ಮ ಮಗುವಿನಮ್ಮ
ಗಾಳಿಯು ಯಾಕೆ ಸುಡದಮ್ಮ?
ಒಂದೆಡೆ ಯಾಕೆ ನಿಲದಮ್ನ?
ಗಾಳಿಗೆ ರೂಪ ಇಲ್ಲಮ್ಮ
ದೇವರ ಮಾಯೆ ಅದು ಅಮ್ಮ
ದೇವರು ಯಾರಮ್ಮ?
ಅವನಿಗೂ ಕುರುಡಮ್ಮ?
ಕುರುಡನು ನಿಜವಮ್ಮ ...
ನೋಡಲು ಸಿಗನಮ್ಮ ..
ಅಪ್ಪ ಅಪ್ಪ ಹೇಳಪ್ಪ?
ವಿದ್ಯೆ ಅಂದರೆ ಏನಪ್ಪ?
ಕಳುವೇ ಆಗದ ಸಿರಿಯಮ್ಮ
ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ
ಹೂಗಳು ಯಾಕೆ ನಗದಮ್ಮ?
ನಕ್ಕರೂ ಸದ್ದು ಇರದಮ್ಮ
ಕಣ್ಣಲಿ ನೀರು ಯಾಕಪ್ಪ?
ಚಿಂತೆಯ ಹೊತ್ತು ತರಲಮ್ಮ
ಕೋಗಿಲೆಯಾಗೆ ಕಾಗೆಗಳ
ಕಂಠವು ಯಾಕೆ ಇಂಪಿಲ್ಲ
ಸೃಷ್ಟಿ ಯು ಮಾಡೋ ಅಡುಗೆಯಲಿ
ತಪ್ಪೇ ಹುಡುಕುವ ಹಾಗಿಲ್ಲ ..
ಕುರುಡು ನಾನ್ಯಾಕಮ್ಮ?
ಯಾರದೀ ತಪ್ಪಮ್ಮ?
ತಪ್ಪಿನ ಅರಿವನ್ನು ಅರಿಯದ ತಪ್ಪಮ್ಮ
ಅಮ್ಮ ಅಮ್ಮ ಹಾಡಮ್ಮ?
ಹಾಡಿಗೆ ಸೋಲೋದ್ಯಾಕಮ್ಮ?
ಹಾಡಿಗೆ ಸೋಲೆ ಇಲ್ಲಮ್ಮ
ಮಾತು ಅಮ್ಮ ಹಾಡು ಅವರಮ್ಮ.
-------------------------------
ಹಾಗಾದರೆ..ಈ ಹಾಡಿನ ವಿರುದ್ದ ಪ್ರಶಸ್ತಿ ಬಾಚಿಕೊಂಡ ಹಾಡು, ಸಾಹಿತಿ ಯಾರು? ಎಂದು ಹುಡುಕುತ್ತಾ ಹೋದಂತೆ ಹಿಂದಿಯ ಪ್ರಸಿದ್ದ ಸಾಹಿತಿ ಜಾವೇದ್ ಅಕ್ತರ್ "ಸಾಜ್" ಚಿತ್ರಕ್ಕೆ ರಚಿಸಿದ ಗೀತೆಗೆ ರಾಷ್ಟ್ರಪ್ರಶಸ್ತಿ ದೊರಕುವಂತಾಗುತ್ತದೆ.ಅಂದೇ ಹಂಸಲೇಖ ರ ಹಾಡಿನ ಸಾಹಿತ್ಯವನ್ನು ಇಂಗ್ಲೀಷ್ ಗೆ ಅನುವಾದಿಸಲಾಗಿದೆ
ಈಗ ಹಂಸಲೇಖರ ಹಾಡಿನ ಸಾಹಿತ್ಯದ ಬಗ್ಗೆ ತಿಳಿಯೋಣ ...
"ಮೌನರಾಗ" ದಲ್ಲಿ ಅಂಧ ಹುಡುಗಿಗೆ ಪ್ರಕೃತಿಯನ್ನ ಅರಿವು ಮೂಡಿಸುವ ಈ ಗೀತೆ ರಚನೆಯು ಒಂದು ವರ್ಷದ ಮುಂಚೆ, ಹಂಸಲೇಖ ಶಿಷ್ಯರಾದ ವಿ.ಮನೋಹರ ಕೂಡ ಈ ಅಂಧಳ ಮನದೊಳಗಿನ ಪ್ರಶ್ನೆಗಳಿಗೆ ಅವಳ ದೇಹದ ಅಂಗಗಳ ಹೋಲಿಕೆ ಮಾಡಿ ಸೂರ್ಯ, ಚಂದ್ರ, ಬಣ್ಣ, ಬೆಳಕು, ಮೋಡ..ಹೀಗೆ ಪ್ರಕೃತಿಯನ್ನ ಅರ್ಥ ಮಾಡಿಸುವ ಗೀತೆಯನ್ನ "ಅನುರಾಗ ಸಂಗಮ "ಚಿತ್ರಕ್ಕಾಗಿ ಬಳಸಿದ್ದರು.ಎಸ್.ಪಿ.ಬಿ ಮತ್ತು ಸುಧಾರಾಣಿ ದನಿಯಲ್ಲಿ ಮನೋಹರವಾಗಿ ಮೂಡಿಬಂದಿತ್ತು.
ಕುಮಾರ್ ಗೋವಿಂದ್ ಮತ್ತು ಸುಧಾರಣಿ ಬಹಳ ನವಿರಾಗಿ ಅಭಿನಯಿಸಿದ ಹಾಡು, ಸಾಹಿತ್ಯ, ಸಂಗೀತ ಎಲ್ಲವೂ ಮನಕ್ಕೆ ಮುದ ನೀಡುವಂತಾಗಿತ್ತು.
ಹಂಸಲೇಖರು ಅಲೌಖಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ, ಮನೋಹರ್ ಲೌಖಿಕದ ಅನುಭವವನ್ನು ಬಳಸುತ್ತಾರೆ.
ಆ ಸಾಹಿತ್ಯವನ್ನು ಒಮ್ಮೆ ಗಮನಿಸಿ ..
------------------------------
ಅನುರಾಗ ಸಂಗಮ (೧೯೯೫) - ತಾವರೆ ಓ ತಾವರೆ ... ತಾವರೆ ಓ ತಾವರೆ ...
ಸಂಗೀತ ಮತ್ತು ಸಾಹಿತ್ಯ: ವಿ.ಮನೋಹರ ಗಾಯನ: ಎಸ್ಪಿ.ಬಿ. ಸುಧಾರಾಣಿ
ಕೋರಸ್: ಆಆಆ ... ಆ .. ಆ ... ಆ
ಗಂಡು: ತಾವರೆ ಓ ತಾವರೆ ... ತಾವರೆ ಓ ತಾವರೆ ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ ...
ತಾವರೆ ಓ ತಾವರೆ ... (ಆಆಆ ..) ತಾವರೆ ಓ ತಾವರೆ ... (ಆಆಆ ..)
ಕೋರಸ್: ಆಆಆ ... ಆ .. ಆ ... ಆ ಆಆಆ ... ಆ .. ಆ ... ಆ ... ಆ ... ಆ ... ಆ ... ಆ ... ಆ ... ಆ ...
ಗಂಡು: ಮುಂಜಾನೆ ಮುಸ್ಸಂಜೆ ಭುವಿಗೆ ಸೂರ್ಯನಾರತಿ
ಹೆಣ್ಣು: ಅಂದ್ರೆ ಸೂರ್ಯ ಹೆಂಗಿರಾಂತನೇ ...
ಗಂಡು: ಮುದ್ದಾದ ಈ ಕೆನ್ನೇ ಕೆಂಪು ಸೂರ್ಯನಾಕೃತಿ ...
ಹೆಣ್ಣು: ಬಣ್ಣ ಅಂದರೇ ಹೆಂಗಿರುತ್ತೇ ...
ಗಂಡು: ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೇನೇ ಬಣ್ಣ
ನಿನ್ನ ಹುಬ್ಬನಂತೆಯೇ ಚೆಲುವ ಮಳೆಬಿಲ್ಲದೂ
ಇಂಥ ನುಣುಪಾದ ರೆಕ್ಕೆನೇ ಹಾರೋ ಚಿಟ್ಟೆಯೂ
ತಾವರೆ ಓ ತಾವರೆ ... ತಾವರೆ ಓ ತಾವರೆ ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ ...
ತಾವರೆ ಓ ತಾವರೆ ... ತಾವರೆ ಓ ತಾವರೆ ...
ಗಂಡು: ಇರುಳೆಲ್ಲಾ ಈ ಗಲ್ಲದಂತೇ ಹೊಳೆವ ಚಂದಿರ ಹೂಂ ... ಹೂಂ ... ಹೂಂ ...
ಹೆಣ್ಣು: ಈ ಇರುಳು ಹಗಲು ಹೆಂಗಿರುತ್ತೇ .....
ನಿದಿರೇನೇ ಇರುಳಮ್ಮ ಹಗಲು ಅಂದರೆಚ್ಚರಾ ..
ಗಂಡು: ಮೋಡಗಳು ತಾರೆಗಳೂ ಅಂದರೇನೂ ....
ಈ ಮುಂಗುರುಳ ಮಾಲೆ ತೇಲೋ ಮುಗಿಲ ಸಾಲ್ಗಳು
ಈ ಕಣ್ಣ ಪ್ರತಿರೂಪ ಸಾವಿರ ತಾರೆ
ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ ತುಂಬಿ ತಂದಂಥ ಆ ಬ್ರಹ್ಮ ತುಂಬಾ ರಸಿಕನೂ
ತಾವರೆ ಓ ತಾವರೆ ... ತಾವರೆ ಓ ತಾವರೆ ...
ಕೋರಸ್: ಆಆಆ ... ಆ .. ಆ ... ಆ ಆಆಆ ... ಆ .. ಆ ... ಆ ... ಆ ... ಆ ... ಆ
---------------------------------
-------
ಹಂಸಲೇಖ, ವಿ.ಮನೋಹರ್ ಈ "ಕುರುಡು ಗೀತೆ" ರಚನೆ ಮಾಡುವ ಸಮಯದಲ್ಲಿ ಇಪ್ಪತ್ತು ವರುಷದ ಹಿಂದೆ
ಅಂದರೆ 1976 ರಲ್ಲಿ "ಚಿರಂಜೀವಿ" ಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಈ ತೆರನಾದ ಅಂಧರ ಭಾವನೆಗಳಿಗೆ ಉತ್ತರಿಸುವ ಪ್ರಶ್ನೋತ್ತರ ಗೀತೆಯನ್ನ ರಚನೆ ಮಾಡಿದ್ದರು. ಬರೆದ ಸಾಹಿತ್ಯಕ್ಕೆ ಸೊಗಸಾದ ರಾಗ ಸಂಯೋಜನೆ ಮಾಡಿದವರು ವಿಜಯಭಾಸ್ಕರ್.
--------------------------------
ಚಿತ್ರ- ಚಿರಂಜೀವಿ (18-05-1976)
ಗಾಯಕರು- ಎಸ್ ಪಿ.ಬಿ, ವಾಣಿಜಯರಾಮ್
ಸಂಗೀತ- ವಿಜಯಭಾಸ್ಕರ್
ಸಾಹಿತ್ಯ- ಆರ್.ಎನ್.ಜಯಗೋಪಾಲ್
ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವ ಕಾಣುವೆ
ನೀನು
ಒಲವು ಕಂಡ ಹೃದಯದಲ್ಲಿ
ಉದಾಹರಣೆಗೆ ಇರುಳಿಲ್ಲ
ಚೆಲುವು ಧರೆಯೆಲ್ಲ ..
|| ಪ ||
ನೀರಲಿ ತೇಲುವ ಎಲೆಗಳ
ನಡುವೆ
ಅರಳಿದ ಹೂವಿದು ಏನು?
ರವಿಯನು ಕಂಡು ಅರಳುತ
ನಗುವ ತಾವರೆ ಹೂವಿದು ಅವನು
ಈ ಹೂವು ಹೇಗಿದೆ?
ನಿನ್ನೀಮೊಗದ ಹಾಗಿದೆ ..
|| ಪ ||
ಗಾಳಿಯು ಬೀಸಲು ತಲೆಯದು ತೂಗಿ
ಆಡುವ
ಇದರ ಹೆಸರೇನು?
ಆಸರೆಗಾಗಿಯೇ ಮರವನು ಬಳಸಿ
ನಿಂತಿಹ ಬಳ್ಳಿಯು ಅವನು
ಈ ಬಳ್ಳಿ ಹೇಗಿದೆ?
ನಿನ್ನೀ ನಡುವಿನ ಹಾಗಿದೆ ..
|| ಪ ||
ದೂರದಿ ಕೇಳುವ ಗಂಟೆಯು
ಮೊಳಗುವ
ಮಂದಿರದಲ್ಲಿಹುದೇನು?
ಭಕುತರಿಗಾಗಿ ಗುಡಿಯಲಿ ನೆಲಸಿಹ
ದೇವರ ಮೂರುತಿ ಅವನು
ಮೂರುತಿ ಹೇಗಿದೆ?
ನಿನ್ನೀ ಮನಸಿನ ಹಾಗಿದೆ ...
|| ಪ ||
--------------------------------
ಇಲ್ಲಿ ಆರ್.ಎನ್.ಜಯಗೋಪಾಲ್ ಬರೀ ಸಾಹಿತಿಯಾಗಿ ಈ ಹಾಡು ರಚಿಸಿದರೆ, ವಿ.ಮನೋಹರ ಮತ್ತು ಹಂಸಲೇಖ ತಮ್ಮದೇ ಸಾಹಿತ್ಯಕ್ಕೆ ತಮ್ಮದೇ ಸಂಗೀತದಿಂದ ಅಂಧತೆಯ ಹಾಡಿಗೆ ಅಲಂಕರಿಸಿದ್ದಾರೆ.ಇಲ್ಲಿ ಒಬ್ಬರ ಅನುಭವದ ಸಾಹಿತ್ಯಗಳು ಒಂದೇ ತೆರನಾದ ಅರ್ಥದ ಜೊತೆಗೆ ತಮ್ಮದೇ ವಿಶಿಷ್ಟತೆಯ ಹಾಡುಗಳಿವು ಎಂದರೆ ತಪ್ಪಲ್ಲ.ಮೂವರು ಸಾಹಿತಿಗಳ ಸಾಹಿತ್ಯ ಮತ್ತು ಹಾಡುಗಳು ಇಲ್ಲಿವೆ.
ತಮ್ಮ ಅನುಭವವನ್ನು ಒಬ್ಬ ವ್ಯಕ್ತಿಯು ಕಟ್ಟಿಕೊಡುವ ಶೈಲಿ ನಿಜಕ್ಕೂ ವಿಭಿನ್ನವಾಗಿದೆ ಎಂದಷ್ಟೇ ಹೇಳಬಹುದು.
ಮೊನ್ನೆ ಹಂಸಲೇಖ ಎಸ್.ಪಿ.ಬಿ ಬಗ್ಗೆ ಮಾತನಾಡುತ್ತಾ ಮಾತಿನ ಮಧ್ಯೆ ಹೇಳಿದ, ರಾಷ್ಟ್ರಪ್ರಶಸ್ತಿ ವಂಚಿತ ಒಂದು ಹಾಡಿನ ವಿಚಾರದ ಬೆನ್ನತ್ತಿ ಹೊರಟ ಗಣಶಿಕಾರಿಗೆ ಬಹುದೊಡ್ಡ ಗಾನಗಹನವೇ ಸೆರೆಯಾಯ್ತು. ಹುಡುಕುತ್ತಾ..ಹುಡುಕುತ್ತಾ ಗಾನಗಣಿಗಾರಿಕೆ ಗೆ ಹೊರಟ ಗಾನ ಮನಸಿಗೆ ಇಷ್ಟೆಲ್ಲಾ ಕಲೆ ಹಾಕುವ ಶ್ರಮವಹಿಸಬೇಕಾಯ್ತು.
ಗಾನಾಸುಮಾ ಪಟ್ಟಸೋಮನಹಳ್ಳಿ


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ