ಗಾನಗಣಿಗಾರಿಕೆ ****************
ಎಚ್ಚರ ....! ಗಂಡೇ ..... ಎಚ್ಚರ ....!
ಹೆಣ್ಣೇ ... ಸಂಸಾರ ... ಸಂಸಾರಿ ಹೆಣ್ಣಿಗೆ ನಮಸ್ಕಾರ.
ಬೇಡ .... ನಂಬಬೇಡ .... ಅರೆ ... ಜೀವ ಹೋದರೂ
ಹೆಂಗಸರನ್ನು ಬಳಸಿ ನೀನು ನೋಡಬೇಡ ..... !!!!
#ಗಾನಗಾರಿಕೆಯಲಿಂದು #ನರಸಿಂಹರಾಜು ರವರ
ಎರಡು ವಿಭಿನ್ನ ಗೀತೆಗಳ ಅವಲೋಕನ
1971 ರಲ್ಲಿ ಬಿಡುಗಡೆಯಾದ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳ ಮೂಲಕ ಮನಸೂರೆಗೊಂಡ ಸಾಕ್ಷಾತ್ಕಾರ ಚಿತ್ರ ಕಣಗಾಲ್ ರ ಸೋದರ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಿತ್ರಿತವಾಗಿತ್ತು. ಸಾಹಿತ್ಯದ ಜನಪ್ರಿಯತೆಯ ಇಮ್ಮಡಿಗೊಳಿಸಿತ್ತು.
ಆದರೆ ಇದರ ಮೂಲ ವಿಡಿಯೊ ಸಿ ಡಿ ಯಿಂದ ಈ ಹಾಡನ್ನು ಹುಡುಕಿ ನಿಮಗಾಗಿ ತಂದಿರುವೆ.
ಆ ಮಧುರ ಹಾಡೆ ... ಎಚ್ಚರ ಗಂಡೇ ಎಚ್ಚರ ...!
ಹೆಣ್ಣಿನ ಬಗ್ಗೆ, ಅವಳ ಆರು ಗುಣಗಳ ಕುರಿತು ವರ್ಣಿಸಿ, ಬರೆದ ಹಾಡು. ನಮ್ಮ ಸಮಾಜದಲ್ಲಿ ಹೆಣ್ಣಿಗೆ ನೀಡುವ ಆದರದ ಬಗ್ಗೆ ಬಿಂಬಿತವಾಗಿದೆ.ಪಿ.ಬಿ.ಶ್ರೀನಿವಾಸ್ ಹಿನ್ನೆಲೆ ದನಿಯಲ್ಲಿ ಹಾಗೆ ನರಸಿಂಹರಾಜು ರವರ ಅಭಿನಯದ ಪಾರ್ಕೊಂಡರಲಿ ಹಾಡುವ ಈ ಹಾಡು ಎಲ್ಲಾ ಗಂಡಸರಿಗೂ ಅವರ ಹಣ್ಣಿನ ಬಗ್ಗೆ ಹೇಳಿದ ತಿಳಿ ಮಾತಿನಂತಿತ್ತು ...
ಈ ಚಿತ್ರ ಬಿಡುಗಡೆಗೊಂಡ ಆರು ವರುಷಗಳ ನಂತರ ತೆರೆಗೆ ಬಂದ "ಅಪರಾಧಿ" ಹೆಸರಿನ ಚಿತ್ರದ ನರಸಿಂಹರಾಜು ಅಭಿನಯದಲ್ಲಿ ಹುಚ್ಚನ ಪಾತ್ರಧಾರಿ ಅಂತಹುದೇ ಪಾರ್ಕೊಂದರಲಿ ಹೆಣ್ಣಿನ ಮೋಸದ ಬಗ್ಗೆ, ಹೆಣ್ಣಿನ ಅವಗುಣಗಳ ಬಗ್ಗೆ ಹಾಡುತ್ತಾ ಅದೇ ಹೆಣ್ಣನ್ನ ನಂಬದಿರಿ ಎಂದು ಹಾಡುವ ಹಾಡು ಭಿನ್ನವಾಗಿ ನನ್ನನ್ನ ಕಾಡಿತು.ಸಾಕ್ಷಾತ್ಕಾರ ಚಿತ್ರದ ಹಾಡಿಗೆ ವಿರುದ್ದವಾಗಿ ಮೋಸ ಹೋದನು ಹುಚ್ಚನಾಗಿ ಬುದ್ದಿವಾದ ಹೇಳುವ ಹಾಡು ಎಲ್ಲಾ ಪ್ರೇಮಿಗಳಿಗೂ ಎಚ್ಚರಿಕೆಯ ಹಾಡಾಗಿತ್ತು.
ವೈ ಆರ್ ಸ್ವಾಮಿ ನಿರ್ದೇಶನದಲ್ಲಿ 1976 ರಲ್ಲಿ ಬಿಡುಗಡೆಯಾದ ಈ ಚಿತ್ರ ಸತ್ಯಂ ಸಂಗೀತದಲ್ಲಿ ಚಿ.ಉದಯಶಂಕರ್ ಸಾಹಿತ್ಯದಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ರ ಕಂಠದಲಿ ಅಮೋಘವಾಗಿ ಮೂಡಿ ಬಂದಿತ್ತು.
ಆರತಿ ಮತ್ತು ಶ್ರೀನಾಥ್ ಅಭಿನಯದಲ್ಲಿ ಈ ಚಿತ್ರ ಸಸ್ಪೆನ್ಸ್ ಚಿತ್ರವಾಗಿ ಅಪರಾಧಿಯೊಬ್ಬನ ಕುರಿತಾದ ಕುತೂಹಲಕಾರಿ ಚಿತ್ರವಾಗಿತ್ತು.
ಒಂದು ಹಾಡು ಮದುವೆಯಾದ ಗಂಡಸರಿಗೆ ಹೆಣ್ಣಿನ ಮಹತ್ವ ಸಾರುವ ಗೀತೆಯಾದರೆ
ಮತ್ತೊಂದು ಗೀತೆ ಮದುವೆಯಾಗದ ಪ್ರೀತಿ ಪ್ರೇಮದ ಅಮಲಿನಲ್ಲಿ ಮುಳುಗಿರುವ ಯುವ ಪ್ರೇಮಿಗಳಿಗೆ ತಿಳಿ ಹೇಲಿ ಎಚ್ಚರಿಸುವಂತ ಗೀತೆಯಾಗಿತ್ತು.
ಕಳೆದ ಜುಲೈ ತಿಂಗಳಲ್ಲಿ ಇವರ ಜನುಮದಿನ ಮತ್ತು ನಿಧನವಾದ ದಿನದಂದೇ ಈ ಲೇಖನ ಬರೆಯುವ ಆಸೆಯಿತ್ತು.ಕೆಲಸದ ಬಿಡುವು ಈಗ ಬರೆಯಲು ಬಿಡುವು ನೀಡಿತು.
ನಿಮ್ಮ ಮೆಚ್ವಿನ ನನ್ನ ಅಂಕಣ ಗಾನಗಣಿಗಾರಿಕೆಯಲ್ಲಿ
ನಿಮಗಾಗಿ ಈ ಯಾವುದೇ ಹಾಡುಗಳ ಸಮರ್ಪಣೆ.
ಹಾಗೆ ಅಂತರ್ಜಾಲ ಕೃಪೆಯಿಂದ ನರಸಿಂಹರಾಜು ರವರ ಕುರಿತ ಸ್ಥೂಲ ಪರಿಚಯ.
ಜೀವನ .....
ನರಸಿಂಹರಾಜು ಅವರು ಜುಲೈ ೨೪, ೧೯೨೬ ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ತಂದೆ ರಾಮರಾಜು ಪೊಲೀಸ್ ಇಲಾಖೆಯ ನೌಕರರಾಗಿದ್ದರು, ತಾಯಿ ವೆಂಕಟಲಕ್ಷ್ಮಮ್ಮನವರು. ಬಾಲ್ಯದಲ್ಲೇ ಅಭಿನಯಕ್ಕೆ ಬಂದವರ ಜೀವನವೇ ಕಲೆಯ ಬದುಕು.
ರಂಗಭೂಮಿಯಲ್ಲಿ ....
ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದಾರೆ.
ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳನ್ನು - ವಿಶ್ವಾಮಿತ್ರ, ರಾಮ, ಉದಾಹರಣೆಗೆ ರಾವಣ. ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದ `ಬೇಡರ ಕಣ್ಣಪ್ಪ` ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದರು.
`ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ`,` ಎಡತೊರೆಯ ಕಂಪನಿ`, `ಹಿರಣ್ಣಯ್ಯನವರ ಮಿತ್ರಮಂಡಲಿ`,` ಭಾರತ ಲಲಿತ ಕಲಾ ಸಂಘ`, ಬೇಲೂರಿನ `ಗುಂಡ ಜೋಯಿಸರ ಕಂಪನಿ`, ಗುಬ್ಬಿಯ` ಚೆನ್ನಬಸವ ನಾಟಕ ನಾಟಕಗಳಲ್ಲಿ ತಮ್ಮ ಜೀವನದ ಬದುಕಿನ ಆರಂಭದ ೨೭ ವರ್ಷಗಳು ನರಸಿಂಹರಾಜದಲ್ಲಿತ್ತು.
ರಾಜ್ ಕುಮಾರ್ ಅವರು `ಬೇಡರ ಕಣ್ಣಪ್ಪ` ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರ ಅವರ ರಂಗಭೂಮಿಯನ್ನು ಕಡೆಗಣಿಸಲಾಗಿಲ್ಲ. ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿರುವಂತೆ ದೊಡ್ಡವರ ಪಾತ್ರಗಳಿಗೆ ಭಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ, ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗದ ಪ್ರವೇಶಕ್ಕೆ ನಿಮಿತ್ತವಾದ `ಬೇಡರ ಕಣ್ಣಪ್ಪ`ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. `ಬೇಡರ ಕಣ್ಣಪ್ಪ` ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರಿಗೆ ಕಾಶಿಯ ಪಾತ್ರ ವಹಿಸಲಾಗಿದೆ. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದುದು ತನ್ಮಯತೆ, ಬೆರಗು ಮೂಡಿಸುವಂತಿತ್ತು ಎಂದು ಕರೆಯಲ್ಪಡುವ ನಿಕಟ ಸಂಪರ್ಕವನ್ನು ಹೊಂದಿದ ಮಾಸ್ಟರ್ ಹಿರಣ್ಣಯ್ಯ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.
ನರಸಿಂಹರಾಜು ಅವರ ಬಗ್ಗೆ ಅವರ ಪುತ್ರಿ ಸುಧಾನರಸಿಂಹರಾಜು ಅವರು ದೂರದರ್ಶನದಲ್ಲಿ ಕಾರ್ಯಕ್ರಮ ಮಾಡಿದಾಗ ಸಂದರ್ಶನದಲ್ಲಿ ಭಾಗವಹಿಸಿದ್ದರು ವರನಟ ರಾಜ್ ಕುಮಾರ್ ಅವರು ಹೇಳುತ್ತಾರೆ: “ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತು ಹಿಡಿಯುವುದು ಉಳಿದಿರುವ ನಮ್ಮವರನ್ನು ಆಕರ್ಷಿಸುತ್ತಿದೆ. ರಾಜ್ ಅವರು ಹೇಳಿದ ಮಾತು ನರಸಿಂಹರಾಜು ಅವರು ಗಳಿಸಿದ ಶ್ರೇಷ್ಠತೆಗೆ ಮತ್ತು ಮತ್ತೆ ಮಾತನ್ನು ಹೇಳುವ ರಾಜ್ ಅವರ ಸಜ್ಜನತೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಿದೆ. ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತಗಳಲ್ಲೊಂದು. ಈ ಜೋಡಿಗೆ ಬಾಲಣ್ಣನನ್ನು ಕೂಡ ಸೇರಿಸಬಹುದು
ಅಂದಿನ ದಿನದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಹೊಂದಿಕೆಯಿಂದ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದುದು ನೆನಪಾಗುತ್ತದೆ. ಬಾಲಣ್ಣ ಅವರದು ರೇಗುವ ಅಸಹನೆಯ ಪಾತ್ರವೋ ನರಸಿಂಹರಾಜು ಅವರ ಹಿಂದೆ ಹಾಗೂ ಅವರ ನಂತರ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮೂಡಿದ್ದಾರೆ. ಹೀಗೆ ಮೂಡಿದ ಹಲವಾರು ಕಲಾವಿದರು ಜನರಿಗೆ ಇಷ್ಟವೂ ಆಗಿದ್ದಾರೆ ನಿಜ. ಆದರೆ ನರಸಿಂಹರಾಜು ಮತ್ತೆ ಆಳವಾದ ಆಪ್ತತೆ ಮೂಡಿಸಿದ ನಟರು ಚಾರ್ಲಿ ಚಾಪ್ಲಿನ್ ಉಳಿದವರು ಮಾತ್ರ.
ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವಿ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಮತ್ತು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. ಈ ಯುಗದಲ್ಲಿ ರಾರಾಜಿಸಿದ ನರಸಿಂಹರಾಜು, ೧೯೫೪ ರಲ್ಲಿ ಬಿಡುಗಡೆಯಾದ `ಬೇಡರ ಕಣ್ಣಪ್ಪ`ದಿಂದ ಆರಂಭವಾಗಿ ೧೯೭೯ ರವರೆಗಿನ ೨೫ ೨೫೦ ಹೆಚ್ಚಿನ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಬೆಳಗಿದವರು.
ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್ ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು ಉಬ್ಬು ಹಳ್ಳಿಯ ತಮ್ಮ ಮಿತ್ರರನ್ನು `ನರಸಿಂಹರಾಜು` ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದಾರೆ. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ಈಗ ತೋರಿಸುತ್ತದೆ. 'ಬೇಡರ ಕಣ್ಣಪ್ಪ'ದಿಂದ ಆರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯತೆಯಲ್ಲಿ ಅವರಿಗೆ ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು.
ಅವನ್ನು ಅವಿಸ್ಮರಣೀಯ ಪಾತ್ರಗಳು ಸಂಪಾದಿಸಿ
'ಸ್ಕೂಲ್ ಮಾಸ್ಟರ್' ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ 'ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ' ಎಂದು ಅವನು ನೋಡಲು ಬಂದ ಹುಡುಗಿ ಹಾಡಿದರೆ 'ಆ ಚಿನ್ಮಯ ಮೂರುತಿ ಶ್ರೀಗೋವಿಂದ'ನ ಸ್ಥಾನದಲ್ಲಿ ಕುಳಿತ ಈ ಪೆಚ್ಚು ನರಸಿಂಹರಾಜು ಪಿಳಿ ಪಿಳಿ ಕಣ್ಸನ್ನೆ ಮಾಡಿದ್ದು ಅಷ್ಟೇ ಮನಮೋಹಕವಾದದ್ದು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ನರಸಿಂಹರಾಜು ಅವರಂತೆ ತೆನಾಲಿ ರಾಮಕೃಷ್ಣನಾಗಿ ಮತ್ತ್ಯಾರೂ ಅಭಿನಯಿಸಿರಲಾರರು. 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ ಉದಯ್ ಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜ್ ಕುಮಾರ್ ಅವರ ಸರ್ವೋತ್ಕೃಷ್ಟ ಸೌಮ್ಯತೆಯ ನಡುವೆ ಕಪಿ ಚೇಷ್ಟೆಯ ಆದರೆ ಕಡೆಯಲ್ಲಿ ಗೌರವಯುತವಾಗಿ ಪರಿವರ್ತಿತವಾಗುವ ನಕ್ಷತ್ರಿಕನಾದ ನರಸಿಂಹರಾಜು ಅಭಿನಯ ಮತ್ತೊಂದು ಶ್ರೇಷ್ಠ ಮಜಲಿನದು. ಜೊತೆಗೆ ಆ ಚಿತ್ರದಲ್ಲಿನ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾದದ್ದು ಕೂಡ. 'ಅಂಡ ಪಿಂಡ ಬ್ರಹ್ಮಾಂಡ' ಎಂದು ಮೂರ್ಖನಾಗಿ ಮಾತನಾಡುತ್ತಾ 'ನಿನ್ನ ಪಿಂಡ' ಎಂದು ವಿಶ್ವಾಮಿತ್ರರಿಂದ ಬೈಯಿಸಿಕೊಳ್ಳುವುದಾಗಲಿ, 'ಏನಿದೀ ಗ್ರಹಚಾರವೋ' ಎಂದು ಹರಿಶ್ಚಂದ್ರನ ಪ್ರಾಣ ತಿನ್ನುವುದಾಗಲೀ, 'ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ' ಎಂದು ಹರಿಶ್ಚಂದ್ರನ ಕ್ಷಮಾಪಣೆ ಯಾಚಿಸುವ ಧೈನ್ಯತೆಯಾಗಲೀ, ಕಡೆಗೆ ಗುರು ವಿಶ್ವಾಮಿತ್ರರಿಗೇ "ಗುರುಗಳೇ ಒಂದು ಮಾತು ಮಾತ್ರ ನನ್ನ ಅನುಭಾವಕ್ಕೆ ಬಂತು, ಈ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಅವರವರ ಕರ್ಮ ಅವರದು" ಎಂದು ಹೇಳುವ ವೇದಾಂತ'ವಾಗಲಿ ಚಿತ್ರರಂಗದ ನಾನು ಕಂಡ ಪಾತ್ರಗಳಲ್ಲಿ ನನ್ನನ್ನು ನೋಡಿದೆ. ಸಂಧ್ಯಾರಾಗ, ವೀರ ಕೇಸರಿ, ರತ್ನ ಮಂಜರಿ, ಕಣ್ತೆರೆದು ನೋಡು, ರಾಯರ ಸೊಸೆ ಹೀಗೆ ನೀವು ಅವರ ಇನ್ನೂರೈವತ್ತು ಚಿತ್ರಗಳಲ್ಲಿ ಒಂದನ್ನು ಪೋಣಿಸುತ್ತಾ ಹೋಗಬಹುದು.
ನಿರ್ಮಾಪಕ
ನರಸಿಂಹರಾಜು ತಮ್ಮ ಚಿತ್ರಗಳಲ್ಲೆಲ್ಲಾ ಹಾಸ್ಯಪಾತ್ರವಾಗಿಯೇ ಉಳಿದರು. ನರಸಿಂಹ ರಾಜು ಅವರು ತಾವೇ ನಿರ್ಮಿಸಿದ 'ಪ್ರೊಫೆಸರ್ ಹುಚ್ಚೂರಾಯ' ಚಿತ್ರದಲ್ಲಿ ತಮ್ಮನ್ನು ತಾವು ವಿಜೃಂಭಿಸಿಕೊಳ್ಳದೆ ಒಂದು ಸಾಮಾಜಿಕ ಕಥೆ ಹೆಣೆದು ಅದರಲ್ಲಿ ತಾವೊಂದು ಉತ್ತಮ ಹೃದಯವಂತ ವ್ಯಕ್ತಿಯಾಗಿ ಮತ್ತು ಅವರ ಸಾಮರ್ಥ್ಯ ಕುರುಹಾದ ಹಾಸ್ಯ ಲೇಪನದ ಪಾತ್ರವಾಗಿ ಮಾತ್ರ ಮೂಡಿತು, ನರಸಿಂಹರಾಜು ತಮ್ಮನ್ನು ಅಗತ್ಯವಾಗಿ ತೋರಿಸಿಕೊಡದೆ ತಮ್ಮ ವ್ಯಕ್ತಿಗೆ ಮಾತ್ರ ಇರುವ ಶ್ರೇಷ್ಠತೆಯನ್ನು ಹೊಂದಿದ್ದಾರೆ
"ನಗಬೇಕು ನಗಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಅಂದರೆ ನಿನ್ನ ಕರ್ಮ" ಎಂದರೆ ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು. ಅವರು ಯಾರ ಬಗ್ಗೆ ಕೆಟ್ಟ ಮಾತನ್ನು ಆಡಿದ್ದಾಗಲೀ, ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲೀ ಮಾಧ್ಯಮದಲ್ಲಿ ಕಾಣುತ್ತಿಲ್ಲ.
ವಿದಾಯ
ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಲಾಗಿದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬವತ್ಸಲ ನರಸಿಂಹರಾಜು, ತಮ್ಮ ೫೬ ನೇ ವಯಸ್ಸಿನಲ್ಲಿ ೧೯೭೯ ರ ಜುಲೈನಲ್ಲಿ ೦ ರಂದು ಎಂದಿನಂತೆ ರಾತ್ರಿ ಉಪಾಹಾರ ಸೇವಿಸಿ ಮಲಗಿದ್ದರು. ಮುಂಜಾನೆ ೪.೩೦ ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು
ಗಾನಾಸುಮಾ ಪಟ್ಟಸೋಮನಹಳ್ಳಿ


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ