ಗುರುವಾರ, ಆಗಸ್ಟ್ 26, 2021

ಗಾನಗಣಿಗಾರಿಕೆ

 


"ಸುಮಲತೆ" ಎಂಬ ಬಹುಭಾಷಾತಾರೆ ಸಂಸದೆಗೆ

ಜನುಮದಿನದ ಶುಭಾಶಯಗಳು

ವಿಶೇಷ ಗಾನಗಣಿಗಾರಿಕೆ


1978 ರಲ್ಲಿ ತೆಲುಗು ಮತ್ತು 1979 ರಲ್ಲಿ ತಮಿಳು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಮಲತಾ ತಮ್ಮ ಹದಿನೈದನೇ ವರ್ಷದಲ್ಲಿ ನಾಯಕನಾಗಿ ಮೊದಲಬಾರಿಗೆ ನಟಿಸಿದವರು.ಹಾಗೆ ಮಲಯಾಳಂ ಭಾಷೆಯಲ್ಲೂ ನಟನೆಯನ್ನ ಆರಂಭಿಸಿದರು.


   ಮೂಲತಃ ಆಂಧ್ರವಾದವರು ಜನಿಸಿದ್ದು ಮದ್ರಾಸಿನಲ್ಲಿ 1963 ಆಗಸ್ಟ್ 27 ರಲ್ಲಿ. ಆಂಧ್ರದ ಗುಂಟೂರಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಈಕೆ ಚಿತ್ರನಟಿಯಾಗಿ 220 ಚಿತ್ರಗಳಲ್ಲಿ ನಟಿಸಿದ್ದಾರೆ.

   ಸುಮಾರು 6 ಭಾಷೆ ಮಾತನಾಡುವ ಇವರು ಚಭಾಷೆಯಲ್ಲಿ ನಟಿಸಿದವರು.ಮೊದಲ ಬಾರಿಗೆ ಕನ್ನಡದಲ್ಲಿ "ರವಿಚಂದ್ರ" ಚಿತ್ರದ ಮೂಲಕ ಅಣ್ಣಾವ್ರ ಸಿನಿಮಾದಲ್ಲಿ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದರು.ನಂತರ ಅಂಬರೀಶ್, ವಿಷ್ಣುವರ್ಧನ್, ಅಶೋಕ್ ಜೊತೆಗೆ ನಟರ ಕನ್ನಡದಲ್ಲಿ 22 ಸಿನಿಮಾಗಳಲ್ಲಿ ನಟಿಸಿದ್ದಾರೆ.ವಿಷ್ಣುವರ್ಧನ್ ಜೊತೆ ಕರ್ಣ, ಕಥಾನಾಯಕ, ಸತ್ಯಜ್ಯೋತಿ " ಹೂವಾಗಿ "ಚಿತ್ರದವರೆಗೆ ಹತ್ತು ಚಿತ್ರಗಳಲ್ಲಿ ನಟಿಸಲಾಗಿದೆ.


  ಇವರು ಮಲಯಾಳಂ, ತೆಲುಗು, ಹಿಂದಿ ಭಾಷೆಯಲ್ಲಿ ಇವರ ಅಭಿನಯಕ್ಕೆ ಹಲವು ಪ್ರಶಸ್ತಿ ಗಳಿಸಿದವರು .1987 ಇವರ ಪಾಲಿಗೆ ಅದೃಷ್ಠದ ವರ್ಷ.


ಇವರಿಗೆ ಮೊದಲಬಾರಿಗೆ "ಅತ್ಯುತ್ತಮ ಹೊಸ ಮುಖ ಪ್ರಶಸ್ತಿ: ಥಿಸೈ ಮಾರಿಯಾ ಪರವೈಗಲ್ (1979) (ತಮಿಳು) ನೀಡಲಾಯಿತು. ನಂತರ


  ವಿಶೇಷ ತೀರ್ಪುಗಾರರ ನಂದಿ ಪ್ರಶಸ್ತಿ (ಅತ್ಯುತ್ತಮ ನಟಿ): ಶ್ರುತಿಲಯಲು (1987) (ತೆಲುಗು)

ಅತ್ಯುತ್ತಮ ನಟಿಗಾಗಿ ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ: ಶ್ರುತಿಲಯಲು (1987) (ತೆಲುಗು)

ಅತ್ಯುತ್ತಮ ನಟಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ: ಆಟಗಾರ ಮತ್ತು ತೂವನತುಂಬಿಕಲ್ (1987) (ಮಲಯಾಳಂ)

ಅತ್ಯುತ್ತಮ ನಟಿಗಾಗಿ ಲಕ್ಸ್ ಪ್ರಶಸ್ತಿ: ಮಹಿಳಾ (1987) (ಮಲಯಾಳಂ)

ಅತ್ಯುತ್ತಮ ನಟಿಗಾಗಿ ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ: ವಯಸ್ಸು (1987) (ಹಿಂದಿ)

ಅತ್ಯುತ್ತಮ ನಟಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ: ಇಸಾಬೆಲ್ಲಾ (1988) (ಮಲಯಾಳಂ) [18]


 ಹೀಗೆಹಾಲವು ಭಾಷೆಗಳಲ್ಲಿ ನಟಿಸಿದ ನಂತರ ಮಂಡ್ಯದ ನಟ ಅಂಬರೀಶ್ ರನ್ನ ವಿವಾಹವಾದರು.


  "ನ್ಯೂಡೆಲ್ಲಿ" ಎಂಬ ಚಿತ್ರ ಮಲಯಾಳಂ, ಹಿಂದಿ, ಕನ್ನಡದಲ್ಲಿ ರೀಮೇಕ್ ಆಗಿ ಇವರಿಗೆ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿ ಯನ್ನ ತಂದುಕೊಟ್ಟಿತು.ಅಬ್ಬಯ್ಯ ನಾಯ್ಡುರವರ ತಾಯಿಕನಸು, ತಾಯಿಯ ಹೊಣೆಯಲ್ಲಿ ನಟಿಸಿದರು.ಇವರ ಬಹತ್ ಚಿತ್ರದ ಹಾಡುಗಳು ಬಹಳ ಜನಪ್ರಿಯತೆ ಪಡೆದಿವೆ.


   ಪರಭಾಷೆಯಿಂದ ಬಂದು ಕನ್ನಡದ ಜನಪ್ರಿಯ ನಟರನ್ನ ವಿವಾಹವಾಗಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ, ಈಗ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುತ್ತಿರುವ ನಟಿ ಸುಮಲತಾ ಅವರಿಗೆ ಇಂದು ಜನುಮದಿನ.


  ಪ್ರೀತಿಯ ಅಂಕಣವಾದ "ಗಾನಗಣಿಗಾರಿಕೆ" ಯಲ್ಲಿ 1986 ರಲ್ಲಿ ವಿಷ್ಣುವರ್ಧನ್ ಜೊತೆ ನಟಿಸಿದ "ಸತ್ಯ ಜ್ಯೋತಿ" ಚಿತ್ರದ ಮಧುರ ಗಾಯನಗೊಂಡ ಅವರಿಗೆ ಶುಭಾಶಯ ವಾಗಿ ಹಂಚಿಕೊಳ್ಳುತ್ತಿರುವೆ.

  ಇಳಯರಾಜ ಸಂಗೀತದ ಈ ಚಿತ್ರದಲ್ಲಿ "ನೀ..ನೀಡಿದ ಪ್ರೇಮ ಸುಖ ತಂದಿದೆ ... ಹಾಡು ನನಗೆ ಬಹಳವಾಗಿ ಕಾಡುವ ಹಾಡು. ಆರ್.ಎನ್. ಚಿತ್ರದ ಈ ಹಾಡು ಸದಾ ಗುನುಗುವ, ಕಾಡುವ ಮಧುರ ಹಾಡಿನಲ್ಲಿ ನೆಲೆ ನಿಂತಿದೆ


ಸತ್ಯ ಜ್ಯೋತಿ (೧೯೮೬) - ನೀ ನೀಡಿದ ಪ್ರೇಮದ ಸುಖ ತಂದಿದೆ

ಸಂಗೀತ: ಇಳೆಯರಾಜ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ. ಎಸ್.ಜಾನಕೀ


ಹೆಣ್ಣು: ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ಬೇಡ

          ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

          ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು


ಗಂಡು: ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ

           ಬಾಳೊಂದು ದೋಣಿ ಅಲ್ಲಿ ನಾವೂ ತೂರಿ ಜೇನಾಟ ಆಡೋ ಆಸೆ ದುಂಬಿ ನಾವಾಗಿ

ಹೆಣ್ಣು: ಕಣ್ಣಲ್ಲಿ ಕಣ್ಣ ಇಟ್ಟು ನೋಡು ನನ್ನ ನಲ್ಲ ನಿನ್ನಾಸೆ ಬಿಟ್ಟು ಬೇರೆ ಏನು ಇಲ್ಲ

          ನಿನ್ನ ಪ್ರೇಮ ಒಂದೇ ಸಾಕೂ ಬೇರೆ ಏನು ಬೇಕಿಲ್ಲ

          ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ

ಗಂಡು: ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲಕ್ಕೆ

          ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

          ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು


ಹೆಣ್ಣು: ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ

           ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲ ನೀನೆಲ್ಲೂ ಅಲ್ಲೇ ಎಲ್ಲ ನಲ್ಲ ಸುಳ್ಳಲ್ಲ

ಗಂಡು: ಬಾಯಾರಿ ದಾಹ ದಾಗ ಎಂದಾಗ ನಾನು ಬಂದೆ ನನ್ನನ್ನೂ ಕಂಡು ಮೋಹ ಮೋಹ ಎಂದೇ

            ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ

            ನಿನ್ನ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ

            ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲವನ್ನು

            ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

            ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು

*********************** ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...