ಸೋಮವಾರ, ಆಗಸ್ಟ್ 23, 2021

ಗಾನಗಣಿಗಾರಿಕೆ

ಗಾನಗಣಿಗಾರಿಕೆ- 2

 ನುಡಿಯದಿರಲೇನು

ಬಯಲಾಗಿಹುದು .. ಎಲ್ಲಾ

ಕಣ್ಣಂಚಿನ ಕೊನೆಯ ಭಾವದಲ್ಲಿ ..... !!!


(ನಟ ಶ್ರೀನಿವಾಸಮೂರ್ತಿ ಯವರ ಸಂದರ್ಶನ ದ ಜೊತೆ #ಗಾನಗಣಿಗಾರಿಕೆ)


ಅಂದು 2000 ನೇ ಇಸವಿ ನವಂಬರ್ ನಂತರದ ತಾರೀಖು .... ಶುಕ್ರವಾರ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಕನ್ನಡ ಚಿತ್ರರಂಗದ, ಇಂದಿಗೂ ಮಾಧುರ್ಯದ ಅಲೆಯಲ್ಲಿ ತೇಲುವಂತೆ ಮಾಡಿದ ಸಂಗೀತ ಮಾಂತ್ರಿಕನ ಜೀವ ಸಾವು- ಬದುಕಿನ ಹೋರಾಟದಲ್ಲಿ ತೊಯ್ದಾಡುತಿತ್ತು ...! ಪ್ರಖ್ಯಾತ ಸಂಗೀತ ನಿರ್ದೇಶಕ ಸೋದರ ಜೋಡಿಯಲ್ಲಿ ಒಬ್ಬರಾದ ರಾಜನ್ ಸೋದರ ನಾಗೇಂದ್ರ ರು ಬಹುಕಾಲದ ಅನಾರೋಗ್ಯದ ಸಾವಿನ ಕ್ಷಣಗಳ ಎಣಿಸುತಿದ್ದರು. ..ನು..ಡಿ.ಯ..ದಿರ..ಲೇ ... ನು..ಬ.ಯ.ಲಾಗಿ.ಹುದೆ..ಲ್ಲಾ..ಕ..ಣ್ಣಂ..ಚಿನ .. ಕೊ..ನೆ.ಯ ಭಾ .. ವ..ದ..ಲ್ಲಿ .., ಎಂದಾಗ 

ತಕ್ಷಣ ಆ ನಟರು .. "ಅದೇಲ್ಲಾ ಈಗ ಯಾಕೆ? ಮಲಗಿ" ಎಂದು ಸಂತೈಸಿದರು.ಅಷ್ಟು ವರುಷವಾದರೂ ಸಾವಿನ ನುಸುಗಲ್ಲಿ ಯೂ ನೆನಪಿಗೆ ಬಂದ ಹಾಡು ಮತ್ತೆ ನಟನನ್ನ ಗುರುತಿಸಿ ನೆನಪು ಮಾಡುತ್ತಿದೆ ಅಂದರೆ ಆ ಹಾಡು ನಿಜಕ್ಕೂ ಧನ್ಯ ... ದುರಂತ ಬೇಕು ..




ಅದರ ಮರುದಿನ ಮುಂಜಾನೆ ಶನಿವಾರ 7 ಗಂಟೆಗೆ ನಾಗೇಂದ್ರರು ಕೊನೆಯುಸಿರೆಳೆದರು ...! 


ಇಷ್ಟು ಹೇಳುತ್ತಾ ಆ ನಟರು ದೂರವಾಣಿಯಲ್ಲಿ ಗದ್ಗದಿತರಾದರು.ಹಾಡೊಂದರ ಹಿನ್ನೆಲೆಯ ಕೆದಕುತ್ತಾ ಹೋದ ನನಗೆ ಈ ಹಾಡಿನ ಹಿಂದೆ ಇಂತಹ ದಯನೀಯ ಕಥೆಯಿರುತ್ತಾ? ಅಂತಾ ಅನ್ನಿಸಿತು.

ಆ ನಟ ಬೇವರು ಅಲ್ಲಾ ಕನ್ನಡಚಿತ್ರರಂಗದ ಪ್ರಸಿದ್ದ ನಟ ಶ್ರೀನಿವಾಸಮೂರ್ತಿ. ಆ ಹಾಡು "ಮರಳಿಗೂಡಿಗೆ" ಚಿತ್ರದ ಖ್ಯಾತ ಕನ್ನಡದ ಕವಿ ನಿಸಾರ್ ಅಹಮದ್ ರಚಿತ ಭಾವಗೀತೆಯಾಗಿತ್ತು.


         ವಿಧಿಯ ವೈಚಿತ್ರವೆಂದರೆ ಇದೇನಾ ..? 

ಮೈಸೂರಿನ ಅಪೋಲೊ ಆಸ್ಪತ್ರೆಯ ಹಾಸಿಗೆ ಮೇಲೆ ಅಣ್ಣನ ದೇಹ ಉಸಿರು ನಿಲ್ಲಿಸಲು ಕ್ಷಣಗಳ ಎಣಿಕೆಯಲ್ಲಿ ಕಾಯುತಿತ್ತು..ಕಂಡೊಡನೆ ದುರುಗುಟ್ಟಿ ..ನೋಡುತಿದ್ದ ಅಣ್ಣನ ಕಣ್ಣುಗಳು ತೆರೆಯಲಾಗದೆ ಮುಚ್ಚಲಾಗಿದೆ ..!

ಬಡಬಡಿಸುತಿದ್ದ ದೇಹ ಬಡಕಲಾಗಿ ಬೆತ್ತಲಾಗಿ ಮಲಗಿತ್ತು ..! ನಾಲ್ಕೈದು ವರುಷದ ಹಿಂದೆ ನನ್ನಣ್ಣನ ಜೊತೆ ಅಪ್ಪನ ಜೀವ ಬಿಟ್ಟ ದೇಹವನ್ನ ಇಬ್ಬರೂ ಸೇರಿ ಆಸ್ಪತ್ರೆಯಲ್ಲಿ ಮೂಕವಾಗಿ ರೋಧಿಸುತ್ತಾ ನೋಡಿದ್ದೆವು.ಇಂದೂ ಅದೇ ಅಣ್ಣನ ನಿಸ್ತೇಜ ದೇಹ ಅಪ್ಪನ ದೇಹವನ್ನು ನೆನಪು ಮಾಡುತಿತ್ತು ..! ಅದರ ಎರಡು ದಿನದ ಹಿಂದಷ್ಟೇ ನಟ ಶ್ರೀನಿವಾಸಮೂರ್ತಿ ಯವರಿಂದ ಸಂಗೀತ ನಿರ್ದೇಶಕ ನಾಗೇಂದ್ರರ ಬಗ್ಗೆ ಲೇಖನ ಬರೆದಿದ್ದು, ಅಲ್ಲೂ ನಾಗೇಂದ್ರರ ಕೊನೆಯ ದಿನದಲ್ಲಿ ಆಸ್ಪತ್ರೆಯಲ್ಲಿ ಈ ತೆರವುಗೊಳಿಸಿದ ಕ್ಷಣಗಳನ್ನ ಕಂಡಿದ್ದ ಅನುಭವ ಹಂಚಿಕೊಂಡಿದ್ದರು.ನನ್ನ ಬದುಕಿನಲ್ಲೂ ಸೇರಿದ್ದ ಸನ್ನಿವೇಶ ಸೃಷ್ಟಿ ಮಾಡಿದ್ದು ದುರಂತ ಮತ್ತು ಕಾಕತಾಳೀಯವೇನೋ ..!

   ನನ್ನ ಒಳಗಿನ ಹಳೆಯ ಹಾಡುಗಳ ಕಣಜದ ಬಿತ್ತನೆ ಮಾಡಿ, ಇಡೀ ಮನೆ ಮನಕೆ ಗಾನದ ಗುಂಗು ಹಿಡಿಸಿದೆ, ನನ್ನ ಗಾನಗಾರಿಕೆ, ಗಾನಗಣಿಗಾರಿಕೆಗೆ ಸ್ಪೂರ್ತಿ ಯಾಗಿದೆ ನನ್ನಣ್ಣ ಈ ಲೇಖನ ಹೊತ್ತವಳಿಗೆ ಗಾನಬುತ್ತಿಯ ಬಿಟ್ಟು ಹೊರಟೇ ಹೋಗಿದ್ದು ಗಾನಸುಮನಿಗೆ ನುಂಗಲಾರದ ತುತ್ತಾಗಿಹೋಯ್ತು ..!

ನನ್ನೆಲ್ಲ ಹಾಡು, ಕವನ, ಲೇಖನಗಳಿಗೆ ಸ್ಪೂರ್ತಿ ಯಾಗಿದೆ

ನನ್ನಣ್ಣನಿಗೆ ಈ ಲೇಖನ ಸಮರ್ಪಣೆ.

~~~~~~~~~~~~~~~~~~~~~~~~~~~~~~~~~~


1984 ರ ಸಮಯ ಕೆಆರ್, ಶಾಂತಾರಾಮ್ ಎಂಬ ಹೊಸ ನಿರ್ದೇಶಕ ಪ್ರಖ್ಯಾತ ಕಾದಂಬರಿಗಾರ್ತಿ ಆರ್ಯಾಂಭಪಟ್ಟಾಬಿ ಯವರ ಅದೇ ಹೆಸರಿನ ಕಾದಂಬರಿಯೊಂದನ್ನ "ಮರಳಿಗೂಡಿಗೆ" ತಮ್ಮ ಮೊದಲ ನಿರ್ದೇಶನದಲ್ಲಿ ತೆರುವ ತರುವ ಸಿದ್ದತೆಯಲ್ಲಿದ್ದರು.

ತಮಿಳಿನ ಖ್ಯಾತ ನಿರ್ದೇಸಕ ಕೆಬಾಲಚಂದರ್ ರವರ "ತಪ್ಪಿದತಾಳ" ಚಿತ್ರದ ಮೂಲಕ ನಟರಾಗಿ ಪರಿಚಯಗೊಂಡರು.ಎಂ.ಎಸ್. "ಕರ್ಣನಸಂಪತ್ತು" ಚಿತ್ರಗಳು ತೆರೆಗೆ ಬಂದವು.ಇವರು ಇತ್ತೀಚೆಗೆ 2016 ಮೇ 31 ರಂದು ಅನಾರೋಗ್ಯದಿಂದ ನಿಧನರಾದರು.


ಹೀಗೆ "ಮರಳಿಗೂಡಿಗೆ" ಚಿತ್ರದ ಒಂದು ಸನ್ನಿವೇಶಕ್ಕೆ ಖ್ಯಾತ ಕವಿ ನಿಸಾರ್ ಅಹಮದ್ ರ ಭಾವಗೀತೆಯ ಹಾಳೆ ಹಿಡಿದು ಚಿತ್ರದ ನಾಯಕರಾದ ಶ್ರೀನಿವಾಸಮೂರ್ತಿ ವರ ಬಳಿ ಶಾಂತರಾಮ್ ರು ತೋರಿಸಿದರು. ಹಾಡಿನ ಸ್ವರ ಪ್ರಸ್ತಾವನೆಯನ್ನು ಮೆಚ್ಚಿ ಅದನ್ನ ಒಂದು ಅತ್ಯದ್ಭುತ ಹಾಡಾಗಿ ಸ್ಮರಣೀಯವಾಗಿಸುವುದು ಈ ಹಾಡು ಈಗ ನನ್ನ "ಗಾನಗಣಿಗಾರಿಕೆ" ಅಂಕಣಕ್ಕೆ ವಸ್ತುವಾಯಿತು ..!


ಹೀಗೆ ಹಾಡಿನ ಹುಟ್ಟಿನ ಕಥೆಯನ್ನ ಹೇಳುತ್ತಾ ಹೋದ ಶ್ರೀನಿವಾಸಮೂರ್ತಿ ಯವರು ಆ ಹಾಡಿಗೆ ಸಂಗೀತ ನೀಡುದ ನಾಗೇಂದ್ರರು ತಮ್ಮ ಸಾವುನ ಕೊನೆಯ ಘಳಿಗೆಯಲ್ಲೂ ಇವರನ್ನ ಕಂಡಾಗ ತೊದಲು ದನಿಯಲ್ಲಿ ಗುನುಗಿದ್ದು ಕಂಡು ಕಣ್ಣಂಚಲಿ ನೀರು ಬಂದಿದ್ದನ್ನು ತಡೆಯಲಾಗಲಿಲ್ಲ.


ಮರಳಿಗೂಡಿಗೆ-ನೀ ನುಡಿಯದಿರಲೇನೂ ...

ಚಿತ್ರ: ಮರಳಿಗೂಡಿಗೆ (1984)

ಸಾಹಿತ್ಯ: ಕೆ.ಎಸ್.ನಿಸ್ಸಾರ್ ಅಹಮದ್

ಸಂಗೀತ: ರಾಜನ್-ನಾಗೇಂದ್ರ

ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ನೀ ನುಡಿಯದಿರಲೇನೂ ಬಯಲಾಗಿಹುದು ಎಲ್ಲಾ

ಕಣ್ಣಂಚಿನ ಕೊನೆಯ ಭಾವದಲ್ಲೀ

ಬಗೆನೋವ ಭಾರಕ್ಕೇ ಬಳಲಿರುವ ಮೊಗವಿಹುದೂ

ಕಾರ್ಮೋಡದಾಗಸದಾ ರೀತಿಯಲ್ಲೀ ....


ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲೀ

ನಿನ್ನ ಸಿರಿವಂತಿಕೆಯಾ ಕಾಣುವಾಸೇ

ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ

ಸವಿಗನಸಿನಿರುಳುಗಳ ಹುಡುಕುವಾಸೇ ...


ಅರೆಗಳಿಗೆ ಸುಖಸ್ವಪ್ನಾ ಬರಲಾರದೆಮ್ಮೊಡನೇ

ವಾಸ್ತವತೆ ಗಹಗಹಿಸೀ ಸೆಳೆಯಲಿಹುದೂ

ಮರೆತೆಲ್ಲ ಕೊನೆಗೊಮ್ಮೇ ಮನಬಿಚ್ಚಿ ನಕ್ಕುಬಿಡೂ

ಬೇರೆ ದಾರಿಯ ನಾವು ಹಿಡಿಯಬಹುದೂ ....


ಆರ್ಯಂಭ ಪಟ್ಟಾಭಿ ಯವರ ಈ ಕಾದಂಬರಿ ಅನಾಥ ಹಠಮಾರಿ ಹೆಣ್ಣೊಬ್ಬಳು ಮಕ್ಕಳ ಭಾಗ್ಯವಿಲ್ಲದ ಶ್ರೀಮಂತನೊಬ್ಬನಿಗೆ ಬಯಸಿ ಎರಡನೆ ಹೆಂಡತಿಯಾಗಿ, ಅವಳ ಹಠ, ಜಂಭದಿಂದ ಕುಷ್ಟರೋಗಕ್ಕೆ ತುತ್ತಾಗಿ ಸಬ್ಯಾ ಹೆಣ್ಣಾಗಿ ಪರಿವರ್ತನೆಯಾಗುತ್ತಿದೆ.

ಮತ್ಸರಪೂರಿತ ಹೆಣ್ಣು ಆಸ್ಪತ್ರೆಯಲ್ಲಿ ಕುಷ್ಟರೋಗದ ಸಂದರ್ಭದಲ್ಲಿ ಬರುವ ಈ ಗೀತೆ ನಟನ ಮೂಲಕ ಅವಳೊಳಗಿನ ತುಮುಲಗಳನ್ನ ಗಟ್ಟಿಯಾಗಿ ಹಾಡುಗಳ ಸಾಲಿನಲ್ಲಿ ಕಟ್ಟಿಕೊಟ್ಟಿದೆ.

ಮತ್ತೆ ಒಂದು ಅನನ್ಯ ಗೀತೆಯನ್ನ ನಿಸಾರ್ ಅಹಮದ್ ರು ಚಿತ್ರಕ್ಕಾಗೆ ಹೇಳಿ ಬರೆಸಿದಂತೆ ಅದರ ಸಾಹಿತ್ಯ ಹೊಂದುವಂತಿತ್ತು ..! ಈ ಚಿತ್ರದ ಭೂಮಿಕೆಯಲ್ಲಿ ಕಲ್ಯಣ್ ಕುಮಾರ್ ನಾಯಕ ನಟರಾದರೂ ವೈದ್ಯ ಪಾತ್ರದಲ್ಲಿ ಬರುವ ಶ್ರೀನಿವಾಸಮೂರ್ತಿ ಈ ಹಾಡಿನಲ್ಲಿ ಮೈ ಮರೆತು ನಟಿಸುತ್ತಿದ್ದಾರೆ.ಇವರ ಬಗ್ಗೆ ಹೇಳಲು ಬೇಕಾದ ಒಂದು ವಿಷಯವಿದೆ. .ಹಾಗಾಗಿ ನಿಸಾರ್ ಕವಿತೆ ನೋಡಿದ ಕೂಡಲೆ ಅದೊಂದು ರಾಗಸಂಯೋಜಸಿ ಆ ಕ್ಷಣದಲ್ಲೇ ಹಾಡಲು ಸಾಧ್ಯವಾಯಿತು.


ಈ ಹಾಡಿನಲ್ಲಿ ಬರುವ ಸಾಲುಗಳಂತೂ ಭಾವವನ್ನೇ ತುಂಬಿ ಸುರಿಸುವಂತಹ ಸಾಲುಗಳು. ..ಕಳೆ ಇರದ ಕಣ್ಣಲ್ಲಿ..ನಿನ್ನ ಸಿರಿವಂತಿಕೆಯ ಕಾಣುವಸೆ .. "ಎಂಬ ಸಾಲುಗಳು ಒಮ್ಮೆ ಕೇಳುಗರ ಹೃದಯವನ್ನ ಕ್ಷಣಕಾಲ ಸ್ಥಬ್ದಗೊಳಿಸುವವು ಎಸ್ ಪಿ ಬಾಲಸುಬ್ರಹ್ಮಣ್ಯಂ ರ ದನಿಯಲ್ಲಿ ಈ ಹಾಡನ್ನು ಕೇಳುತ್ತಾ ಕನ್ನಡಕಧಾರಿ ಶ್ರೀನಿವಾಸಮೂರ್ತಿ ಯವರ ಅಭಿನಯದಲ್ಲಿ ನೋಡುವುದೇ ಗಾನಾನಂದ.!


ಬಾಲ್ಯದಲ್ಲಿ ಆಕಾಶವಾಣಿ ಯಲ್ಲಿ ನಾನು ಕೇಳಿದ ಹಾಡನ್ನು ಚಲನಚಿತ್ರದಲ್ಲಿ ಇರುವುದನ್ನು ಗಮನಿಸಿ ಹಾಡಿಗಾಗಿ ಆಕಾಶವಾಣಿ ಗೆ ಅಲೆದು, ಕೊನೆಗೆ ನಾ ಬರೆವ ಅಂಕಣಕೆ ಆ ಹಾಡಿನ ನಟನ ಸಂದರ್ಶನ ಮಾಡುವ ಭಾಗ್ಯ ನಿಜಕ್ಕೂ ನನ್ನ ಪಾಲಿಗೆ ಬಂದದ್ದು ಗಾನಗಾರಿಕೆಯ ಹೆಮ್ಮೆ ಅಂದರೂ ತಪ್ಪಲ್ಲ.

ನನಗೆ ಹಾಡಿನ ಹಿಂದಿನ ಮಾಹಿತಿ ನೀಡಿದ ನಟ ಶ್ರೀನಿವಾಸಮೂರ್ತಿ ರವರಿಗೆ ವಂದನೆಗಳು.

ಕವಿಯೊಬ್ಬ ಬರೆದ ಗೀತೆಗೆ ನಟನೊಬ್ಬ ರಾಗ ಜೋಡಿಸಿ, ಸಂಗೀತ ನಿರ್ದೇಶಕ ತನ್ನ ಸಾವಿನ ಅಂಚಿನಲ್ಲಿ ನೆನಪು ಮಾಡಿದ ಹಾಡು ಹುಟ್ಟಿದ ಕಥೆ ನಿಮಗಾಗಿ ಈ ನಿಮ್ಮ ಸೋದರನ ಲೇಖನದಿಂದ.


ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...