ಸೋಮವಾರ, ಆಗಸ್ಟ್ 23, 2021

ಗಾನಗಣಿಗಾರಿಕೆ - 1

ಪೀತಿಯ ಬಂಧುಗಳಿಗೆ


ಪಟ್ಟಸೋಮನಹಳ್ಳಿ ಗಾನಸುಮಾ ನಾದ ನಾನು ನನ್ನ ಹೊಸ ಬ್ಲಾಗ್ "ಗಾನಗಣಿಗಾರಿಕೆ" ಎಂಬ ಸಿನಿಗಾನಮಾಹಿತಿಯ ಅಂಕಣಕ್ಕೆ ನಿಮ್ಮೆಲ್ಲರನ್ನ ಪ್ರೀತಿಯಿಂದ ಸ್ವಾಗತಿಸತ್ತಿರುವೆ.


  ಹಳೆಯ ಹಾಡು, ಮಾಹಿತಿ, ಮನೋರಂಜನೆ ಕುರಿತು ನನ್ನ "ಗಾನಗಣಿಗಾರಿಕೆ" ಅಂಕಣವನ್ನು ಓದುವುದು, ಹರಸಿ, ಹಾರೈಸಿ, ಸಲಹೆ ಸಹಕಾರ ನೀಡುವಿರೆಂಬ ವಿಸ್ವಾಸದಲ್ಲಿರುವೆ ..

****************************

 ಮಲ್ಲಿಗೆ_ಮಲ್ಲಿಗೆ_ಹೃದಯದ

ಮಾತು_ಕೇಳಿದೆಯಾ ...?!

ವಿಶೇಷ ಗಾನಗಣಿಗಾರಿಕೆ


ಇಂದು ಮಧುರ ಹಾಡುಗಳ ಸಂಗೀತ ನಿರ್ದೇಶಕ ಎಸ್.ಎ.ರಾಜ್ ಕುಮಾರ್ ಜನುಮದಿನ.

ಅವರಿಗೊಂದು ಅವರದೇ ಹಾಡಿನ 

#ಗಾನಗಣಿಗಾರಿಕೆ


  ಅದು 1990 .ದ್ವಾರಕೀಶ್ ಎಂಬ ಕನ್ನಡದ ನಟ, ನಿರ್ಮಾಪಕ ತಮಿಳಿನಲ್ಲಿ ಮುರಳಿ ಅಭಿನಯದ "ಪುದು ವಸಂತಂ" ಎಂವಮಬ ಚಿತ್ರದ ಹಕ್ಕನ್ನ ತಂದು ಕನ್ನಡದಲ್ಲಿ ಹೊಸ ನಟನಟರನ್ನ ಬಳಸಿ "ಶೃತಿ" ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಲಾಯಿತು.

"ಪ್ರಿಯದರ್ಶಿನಿ" ಎಂಬ ಸಣ್ಣಪುಟ್ಟ ಅಭಿನಯವನ್ನು ಮಾಡುತಿದ್ದ ನಟಿಯನ್ನ ಕರೆತಂದು "ಶೃತಿ" ಎಂಬ ಹೆಸರಿನ ಶೀರ್ಷಿಕೆ ಹೆಸರಲ್ಲೇ ನಾಮಕರಣ ಮಾಡುತ್ತಾರೆ.


  ತಮಿಳಿನ "ಪುದುವಸಂತಮ್" ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ಎಸ್.ಎ.ರಾಜ್ ಕುಮಾರ್ ಎಂಬ ಸಂಗೀತ ನಿರ್ದೇಶಕ "ಶೃತಿ" ಚಿತ್ರಕ್ಕೂ ಕರೆತಂದರು. ಕಲ್ಯಾಣ "ಅವರನ್ನು ತಮ್ಮದೇ ಸಂಗೀತ ನಿರ್ದೇಶನಕ್ಕೆ ಆಯ್ಕೆ ಮಾಡುತ್ತಾರೆ.ಹೀಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿಯವರೆಗೆ ಹದಿನಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಲಾಗುತ್ತಿದೆ.


  ತಮಿಳು, ತೆಲುಗು ಚಿತ್ರಗಳಲ್ಲಿ ಹಲವು ಹಿಟ್ ಗೀತೆಗಳನ್ನ ನೀಡಿದ ಇವರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

"ಶೃತಿ" ಚಿತ್ರದ "ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ..." ಎಂದು ಹಾಡುವವರು ಇವರೇ ಹಾಡಿರುವುದು ಕೂಡ ವಿಶೇಷ.


  ಚಂದ್ರಚಕೋರಿ, ಸಿರಿವಂತ, ಸೇವಂತಿ ಸೇವಂತಿ, ಜೇಷ್ಠ, ಮದುವೆ ಚಿತ್ರದ ಗೀತೆಗಳು ಇಂದಿಗೂ ಮದಿರಗೀತೆಗಳಿಂದ ಜನಪ್ರಿಯವಾಗಿದೆ.ದ್ವಾರಕೀಶ್ ಪ್ರಿಯ ಸಂಗೀತ ನಿರ್ದೇಶಕನಾಗಿ ಕನ್ನಡಕ್ಕೆ ಬಂದ ಎಸ್.


  ತಮಿಳಿನ 'ಸೂರ್ಯವಂಶಂ' ಚಿತ್ರದ ಗೀತೆಗಳಂತು ಮೋಡಿಯನ್ನೇ ಮಾಡಿಬಿಟ್ಟವು. "ರೋಸಾಪು..ಚಿನ್ನ ರೋಸಾಪು..ಹಾಡು, 'ಶೃತಿ'ಚಿತ್ರದ" ಹಾಡೊಂದು ನಾ ಹಾಡುವೆನು .. "," ಚಂದ್ರಚಕೋರಿ "ಚಿತ್ರದ" ಕುಹು ಕುಹು ಕೋಗಿಲೆ .. "," ಸಿರಿವಂತ "ಚಿತ್ರ" ಎಡೆಗೆ ಸಿಡಿಲು ಬಡಿಯಿತೆ ... "ಹಾಡುಗಳು ಇವರ ಮಧುರಸಂಯೋಜನೆಗೆ ಸಾಕ್ಷಿಯಾದವು .


  1991 ರಲ್ಲು ಕನ್ನಡದ ಇವರ ಎರಡನೆ ಚಿತ್ರವಾದ "ಗೌರಿಕಲ್ಯಾಣ" ಚಿತ್ರದ ಒಂದು ಗೀತೆ ನನ್ನ ಇಂದಿನ "ಗಾನಗಣಿಗಾರಿಕೆ" ಯ ಅಮರ ಗೀತೆ.

ದ್ವಾರಕೀಶ್ ನಿರ್ದೇಶನದ ಈ ಚಿತ್ರದಲ್ಲಿ ಇವರದೇ ಸಂಗೀತದಲ್ಲಿ ಆರ್.ಎನ್.ಜಯಗೋಪಾಲ್ ಬರೆದಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ವಿರಹಗೀತೆಯೊಂದು ನನ್ನ ಇನ್ನಿಲ್ಲದಂತೆ ಕಾಡುವ ಹಾಡಾಗಿ ಉಳಿದುಹೋಗಿದೆ.

ಒಂದು ಒಳ್ಳೆಯ ಮಧುರ ಸಂಗೀತಕ್ಕೆ ಅಷ್ಟು ಸುಮಧುರ ಸಾಹಿತ್ಯ ಮತ್ತು ಎಸ್.ಪಿ.ಬಿ ಯವರ ಗಾಯನ ಅದೆಷ್ಟು ಹೊಂದಾಣಿಕೆಯಾಗಿದೆ ಎಂದರೆ..ಒಮ್ಮೆ ಕೇಳಿದರೆ ನಿಮ್ಮನ್ನ ಭಾವನಪ್ರಪಂಚಕ್ಕೆ ಕರೆದೊಯ್ದುಬಿಡುವ ಅತಿ ಮಧುರ ಗೀತೆ.


  ಒಮ್ಮೆ ನನ್ನ ಎಸ್.ಪಿ.ಬಿ ಸಂಗ್ರಹದ ಸಿ ಡಿ ಯಲ್ಲಿ ಈ ಹಾಡು ಕೇಳಿ ಈ ಹಾಡಿನ ಚಿತ್ರ ಯಾವುದು ಎಂದು ತುಂಬಾ ದಿನ ತಲೆ ಕೆಡಿಸಿಕೊಂಡು ಹುಡುಕಿದೆ.ನಂತರ ಗೌರಿ ಕಲ್ಯಾಣ ಚಿತ್ರದ್ದು ಎಂದು ತಿಳಿದು ಈ ಹಾಡಿನ ಬಗ್ಗೆ ಬರೆಯುವ ಆಸೆ ಮನದಲ್ಲೇ ಮೂಡಿತ್ತು.


 ಪ್ರೀತಿಸಿ ಮೊಸ ಹೋಗುವ ನಾಯಕನ ಮನದಾಳದ ವೇದನೆಯ ಪ್ರತಿಬಿಂಬಿಸುವ ಈ ಹಾಡಿನಲ್ಲಿ ಮೋಸಹೋದ ಅದೆಷ್ಟೋ ಹುಡುಗರ ಅಂತರಂಗದ ವೇದನೆ ಇದೆ, ವಿರಹದ ವಿಷಾದವಿದೆ..ಹೆಣ್ಣಣ್ಣ ಕುಟುಕುವ, ಟೀಕಿಸುವ, ನಯವಾಗೇ ತಿರಸ್ಕರಿಸುವ ಭಾವವುದೆಯಲ್ಲಾ ನಿಜಕ್ಕೂ ಕೇಳಬೇಕು.


   ಒಂದು ಹಣ್ಣಿನ ಹಿಡಿ ಪ್ರೀತಿಗಾಗಿ ಏನೆಲ್ಲಾ ಪಡಿಪಾಟಲು, ತ್ಯಾಗ, ಕಣ್ಣೀರು ಹರಿಸಿ ಕಾದ ಹುಡುಗ ಹುಡುಗನಿಗೆ ಪ್ರೀತಿಯ ತಿರಸ್ಕಾರ ವಿಷಾದ ಗೀತೆಗೆ ಕಾರಣ.


  ಈ ಹಾಡಿನ ಆರಂಭಿಕ ಪಲ್ಲವಿಯ ಸಾಲುಗಳಲ್ಲೇ

"..ನಂಬಿ ಮೋಸ ಹೋದೆ

ಸಾಕಿನ್ನು ನಾಟಕ ..

 ಪ್ರೀತಿ ಮಾಡಬೇಡ ಎಂದು

ನೀನು ನುಡಿದೆಯಾ ..

ಮೋಸ ಹೋಗಬೇಡ ಎಂದು

ಎಚ್ಚರ ತಂದೆಯಾ

ನಾನು ಪಾಠ ಕಲಿತೆನು

ಇನ್ನು ಮೇಲೆ ಎಂದು ಮರೆಯೆನು ... "

ಎಂಬ ಸಾಲುಗಳಲ್ಲಿ ಮೊಸದಿಂದ ಕಲಿತ ಪಾಠದ ಅರಿವು ನಿಜಕ್ಕೂ ಪಲ್ಲವಿಸುತ್ತದೆ.ಕೇಳುವಾಗಲೂ ಒಂದು ರೀತಿಯ ಹುಡುಗನ ಮೇಲೆ ಅನುಕಂಪವೂ, ಹುಡುಗಿಯರ ಮೇಲೆ ಕೋಪವೂ ಉಂಟಾಗುತ್ತದೆ.


   ಇನ್ನು ಎಸ್ ಪಿ ಬಿಯವರಂತೂ ಹಾಡಿನ ಮಾಧುರ್ಯಕೆ ಎದೆ ತುಂಬಿ ಹಾಡಿ ನಮ್ಮನ್ನ ಪರವಶಗೊಂಡು ಕೇಳುವಂತೆ ಮಾಡಿಬಿಡುತ್ತಾರೆ.


  ಸದಾ ಗಾನದೆಡೆಯೊಳಗೆ ಕಾಡುತ್ತಾ ಕಾಡುತ್ತಾ ಹಾಡಿಸಿ, ನನ್ನ ನೋವಿಗೆ ಸಮಾಧಾನ ನೀಡುತ್ತಾ, ಧೈರ್ಯ ತುಂಬುತ್ತಾ ಒಂದು ರೀತಿಯ ನೊಂದ ಮನಸಿಗೆ ಸಾಂತ್ವಾನ ಹೇಳುವ ನವಿಲುಗರಿಯ ನೆವರಿಕೆ ಈ ಹಾಡಿನಲ್ಲಿದೆ.


  ಹರ್ಷವರ್ಧನ್ ಎಂಬ ಹೊಸ ನಟನ ಅಭಿನಯ ಅಷ್ಟೇನು ಸೆಳೆಯುವ ಹಾಡು, ಸಂಗೀತ, ಸಾಹಿತ್ಯ ನಮ್ಮನ್ನ ಸೆಳೆಯುವಲ್ಲಿ ಸಫಲವಾಗಿಬಿಡುತ್ತದೆ.


  ಇಂತಹ ಮಧುರ ಹಾಡಿಗೆ ಸ್ವರಪ್ರಸ್ತಾರ ಹಾಕಿದ ಸಂಗೀತ ನಿರ್ದೇಶಕ ಎಸ್.ಎಮ್.ರಾಜ್ ಕುಮಾರ್ ಗೆ ಇಂದು ಜನುಮದಿನದ ಸಂಭ್ರಮ.ಅವರಿಗೆ ಶುಭಾಶಯ ಹೇಳುತ್ತಾ ಈ ಲೇಖನವನ್ನ ಅರ್ಪಿಸುವೆ.


  ಗಾನಾಸುಮಾಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...